ADVERTISEMENT

ನೀರಿನ ಅದಾಲತ್‌ ಇಂದು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:37 IST
Last Updated 26 ಫೆಬ್ರುವರಿ 2018, 19:37 IST

ಬೆಂಗಳೂರು: ಜಲಮಂಡಳಿಯ ವಾಯವ್ಯ-2, ಪಶ್ಚಿಮ-4, ಮತ್ತು ನೈರುತ್ಯ-4 ಉಪವಿಭಾಗಗಳ ನೀರಿನ ಅದಾಲತ್ ಫೆ.27ರಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಬೆಳಿಗ್ಗೆ 9.30ರಿಂದ 11ರವರೆಗೆ ನಡೆಯಲಿದೆ.

ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬದ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದು.

ವಾಯವ್ಯ-2 ಉಪವಿಭಾಗ ವ್ಯಾಪ್ತಿಗೆ ಬರುವ ಕಾಮಾಕ್ಷಿಪಾಳ್ಯ, ಕಮಲಾನಗರ, ಅಗ್ರಹಾರ, ದಾಸರಹಳ್ಳಿ, ಪಶ್ಚಿಮ ಕಾರ್ಡ್ ರಸ್ತೆ-1 ಮತ್ತು 2, ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಮೋದಿ ಆಸ್ಪತ್ರೆ ಹಿಂಭಾಗದಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಬಗೆಹರಿಸಿಕೊಳ್ಳಬಹುದು.

ADVERTISEMENT

ಮಾಹಿತಿಗೆ: 23491123.

ಪಶ್ಚಿಮ-4 ಉಪವಿಭಾಗ ವ್ಯಾಪ್ತಿಗೆ ಬರುವ ಚಂದ್ರಾ ಬಡಾವಣೆ-1, ವಿಜಯನಗರ, ಒಎಚ್‍ಟಿ ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಅರ್ಕಾವತಿ ಭವನ, ನೆಲಮಹಡಿ, 5ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ, ಆರ್‌ಪಿಸಿ ಬಡಾವಣೆ ರಸ್ತೆಯಲ್ಲಿರುವ ಸಹಾಯಕ ಕಾರ್ಯ
ನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಬಗೆಹರಿಸಿಕೊಳ್ಳಬಹುದು.

ಮಾಹಿತಿಗೆ: 22945171.

ನೈರುತ್ಯ-4 ಉಪವಿಭಾಗ ವ್ಯಾಪ್ತಿಗೆ ಬರುವ ಜೆಪಿ ನಗರ-1, ಜಯನಗರ 4ನೇ ‘ಟಿ’ ಬ್ಲಾಕ್, 4ನೇ ಬ್ಲಾಕ್, ಹೊಂಬೇ
ಗೌಡನಗರ ಭೈರಸಂದ್ರ ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಕಪಿಲ ಭವನ, 1ನೇ ಮುಖ್ಯ ರಸ್ತೆ, 36ನೇ ಅಡ್ಡ ರಸ್ತೆ, 4ನೇ ‘ಟಿ’ ಬ್ಲಾಕ್, ಜಯನಗರ ಸಹಾಯಕ ಕಾರ್ಯ
ನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಬಗೆಹರಿಸಿಕೊಳ್ಳಬಹುದು.
ಮಾಹಿತಿಗೆ: 22945148.  ವಾಟ್ಸ್‌ ಆ್ಯಪ್‌ ಸಂಖ್ಯೆ 8762228888ಗೆ ದೂರುಗಳನ್ನು ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.