ಬೆಂಗಳೂರು: ಬೆಂಗಳೂರು ಜಲಮಂಡಳಿಯ ಉತ್ತರ-1 ಉಪವಿಭಾಗದ ನೀರಿನ ಅದಾಲತ್ ಗುರುವಾರ (ಇದೇ 1) ಬೆಳಿಗ್ಗೆ 9.30ರಿಂದ 11ರವರೆಗೆ ನಡೆಯಲಿದೆ.
ಎಂಇಐ ಬಡಾವಣೆ, ಸೋಲದೇವನ ಹಳ್ಳಿ, ಬಾಹುಬಲಿನಗರ ಸೇವಾಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅದಾಲತ್ನಲ್ಲಿ ಬಗೆಹರಿಸಿಕೊಳ್ಳಬಹುದು.
ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆಗೆ ವಿಳಂಬ ಕುರಿತ ಅಹವಾಲುಗಳನ್ನು ಇಲ್ಲಿ ಬಗೆಹರಿಸಲಾಗುತ್ತದೆ.
ಸ್ಥಳ: ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ, ನಂ.1, 7ನೇ ಮುಖ್ಯ ರಸ್ತೆ, ಎಂಇಐ ಬಡಾವಣೆ
ಮಾಹಿತಿಗೆ: 080–28371048
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.