ADVERTISEMENT

ಪಕ್ಷನಿಷ್ಠೆ ಕಲಿಸಿದ ಶಂಕರಮೂರ್ತಿ: ದತ್ತ

​ಪ್ರಜಾವಾಣಿ ವಾರ್ತೆ
Published 4 ಮೇ 2014, 19:30 IST
Last Updated 4 ಮೇ 2014, 19:30 IST
ಸಮಾಜದ ಮುತ್ತು ಮಾಸಪತ್ರಿಕೆಯ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವೇದಮೂರ್ತಿ ಗಾಯತ್ರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿದರು. ಶಾಸಕ ವೈ.ಎಸ್.ವಿ.ದತ್ತ, ಉದ್ಯಮಿ ಮಾನಂದಿ ನಂಜುಂಡ ಶೆಟ್ಟಿ, ವೇದಬ್ರಹ್ಮ ಎನ್‌.ವೇಣುಗೋಪಾಲ ಶಾಸ್ತ್ರಿ ಮತ್ತಿತರರು ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ಸಮಾಜದ ಮುತ್ತು ಮಾಸಪತ್ರಿಕೆಯ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವೇದಮೂರ್ತಿ ಗಾಯತ್ರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿದರು. ಶಾಸಕ ವೈ.ಎಸ್.ವಿ.ದತ್ತ, ಉದ್ಯಮಿ ಮಾನಂದಿ ನಂಜುಂಡ ಶೆಟ್ಟಿ, ವೇದಬ್ರಹ್ಮ ಎನ್‌.ವೇಣುಗೋಪಾಲ ಶಾಸ್ತ್ರಿ ಮತ್ತಿತರರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಡಿ.ಎಚ್.ಶಂಕರಮೂರ್ತಿ ಅವರಿಂದ ಪಕ್ಷನಿಷ್ಠಯನ್ನು ಕಲಿತಿದ್ದೇನೆ’ ಎಂದು ಶಾಸಕ ವೈ.ಎಸ್‌.ವಿ.ದತ್ತ ಹೇಳಿದರು.
ಸಮಾಜದ ಮುತ್ತು ಮಾಸ ಪತ್ರಿಕೆಯು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಡಿ.ವಿ.ಗೋವಿಂದರಾಜಲು ಅವರ ‘ವೇದಮಾತೆ ಗಾಯತ್ರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿ.ಎಚ್.ಶಂಕರಮೂರ್ತಿ ಅವರು ತಪಕ್ಷಾಂತರ ಮಾಡದೆ ಪಕ್ಷ ನಿಷ್ಠೆ­ಯನ್ನು ಕಾಪಾಡಿಕೊಂಡು ಬಂದಿದ್ದಾರೆ. ನಮ್ಮ ಪಕ್ಷಗಳು ಬೇರೆ ಬೇರೆಯಾ­ಗಿದ್ದರೂ ಅವರಿಂದ ನಿಷ್ಠೆಯನ್ನು ಕಲಿತಿದ್ದೇನೆ ಎಂದು ಹೇಳಿದರು.

ವಿಧಾನಪರಿಷತ್‌ ಸಭಾಪತಿ ಡಿ.ಎಚ್.­­ಶಂಕರಮೂರ್ತಿ ಮಾತನಾಡಿ, ಗೋವಿಂದರಾಜಲು ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಪುಸ್ತಕ ಬರೆದು ಬಿಡುಗಡೆ  ಮಾಡುತ್ತಿದ್ದಾರೆ. ಅದು ಅವರ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.