ADVERTISEMENT

ಫೇಸ್‍ಬುಕ್‍ನಲ್ಲಿ ಟಿಪ್ಪು ಸುಲ್ತಾನ್, ಸಿದ್ದರಾಮಯ್ಯ ಅವಹೇಳನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 20:23 IST
Last Updated 27 ಅಕ್ಟೋಬರ್ 2017, 20:23 IST

ಉಪ್ಪಿನಂಗಡಿ: ಟಿಪ್ಪು ಸುಲ್ತಾನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಅಸಹ್ಯಕರ ರೀತಿಯಲ್ಲಿ ಚಿತ್ರಿಸಿ ಫೇಸ್‍ಬುಕ್‍ನಲ್ಲಿ ಹಾಕಿದ್ದಾರೆ ಎಂದು ಇಬ್ಬರ ವಿರುದ್ಧ ಉಪ್ಪಿನಂಗಡಿ ಯುವ ಕಾಂಗ್ರೆಸ್ ಮುಖಂಡರು ಇಲ್ಲಿಯ ಪೊಲೀಸರಿಗೆ ದೂರು ನೀಡಿದ್ದಾರೆ.

‘ಆರೋಪಿಗಳಾದ ಸದಾನಂದ ಕಾರ್ ಕ್ಲಬ್ ಹಾಗೂ ಯೋಗೀಶ್ ಪ್ರಭು ಎಂಬವರು ಈ ಕೃತ್ಯ ಎಸಗಿದ್ದಾರೆ‘ ಎಂದು ಆರೋಪಿಸಲಾಗಿದೆ. ಪುತ್ತೂರು ವಿಧಾನ ಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಶೀಫ್ ಈ ದೂರು ನೀಡಿದ್ದಾರೆ.

ಕುಕ್ಕುರಗಾಲಿನಲ್ಲಿ ಕುಳಿತು ಕೊಂಡಿರುವ ಭಂಗಿಯಲ್ಲಿರುವ ನಗ್ನದೇಹದ ಎರಡು ಚಿತ್ರಗಳಿಗೆ ಟಿಪ್ಪು ಸುಲ್ತಾನ್ ಹಾಗೂ ಸಿದ್ದರಾಮಯ್ಯ ಮುಖದ ಚಿತ್ರ ಜೋಡಿಸಿ ‘ಟಿಪ್ಪು ಮತ್ತು ಸಿದ್ದು’ ಎಂದು ತಲೆಬರಹ ನೀಡಿ ಯೋಗೀಶ್ ಪ್ರಭು ಎಂಬವರು ತನ್ನ ಫೇಸ್‍ಬುಕ್‍ನಲ್ಲಿ ಹಾಕಿದ್ದರು. ಇದನ್ನು ಸದಾನಂದ ಕಾರ್‍ಕ್ಲಬ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.