ADVERTISEMENT

ಬಟ್ಟೆ ಒಗೆದು ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:31 IST
Last Updated 10 ಏಪ್ರಿಲ್ 2018, 19:31 IST

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮಡಿವಾಳ ಜನಾಂಗದ ಮುಖಂಡರಿಗೆ ಟಿಕೆಟ್ ಘೋಷಣೆ ಮಾಡದೇ ಇದ್ದಲ್ಲಿ, ಏಪ್ರಿಲ್‌14ರಂದು (ಅಂಬೇಡ್ಕರ್ ಜಯಂತಿ) ಮೂರು ಪಕ್ಷಗಳ ಕಚೇರಿಯ ಎದುರು ಬಟ್ಟೆ ಒಗೆದು ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತೀಯ ರಜಕ(ಮಡಿವಾಳ) ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಜೆ.ಎಂಜೇರಪ್ಪ ತಿಳಿಸಿದರು.

ಇಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್‌ಗಾಗಿ ಈಗಾಗಲೇ ಮೂರೂ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದು, ಭರವಸೆ ನೀಡಿದ್ದಾರೆ ಎಂದರು.

ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಗೋಪಿಕೃಷ್ಣ, ಬೇಲೂರು ಕ್ಷೇತ್ರದಿಂದ ಬೇಲೂರು ಲಕ್ಷ್ಮಣ ಅವರಿಗೆ ಬಿಜೆಪಿಯಿಂದ, ಸೊರಬದಲ್ಲಿ ರಾಜು ತಲ್ಲೂರು ಅವರಿಗೆ ಕಾಂಗ್ರೆಸ್‌ನಿಂದ ಮತ್ತು ಕಾರ್ಕಳ ಕ್ಷೇತ್ರದಿಂದ ಸತೀಶ್ ಸಾಲಿಯಾನ್ ಅವರಿಗೆ ಜೆಡಿಎಸ್‍ನಿಂದ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ADVERTISEMENT

ಕರ್ನಾಟಕ ರಾಜ್ಯ ಮಡಿವಾಳ ಯುವ ವೇದಿಕೆಯ ಕಾರ್ಯಾಧ್ಯಕ್ಷ ಚಂದ್ರು ವಸಂತಪುರ. ಉಪಾಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಯುವ ವೇದಿಕೆಯ ಉಪಾಧ್ಯಕ್ಷ ರಾಜು ಬಳ್ಳೂರು, ಸಂಘಟನಾ ಕಾರ್ಯದರ್ಶಿ ಸಂತೋಷ್, ಖಜಾಂಚಿ
ಡಿ.ವಿ.ಹಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.