ADVERTISEMENT

ಬಿಜೆಪಿ ಯುವ ಮೋರ್ಚಾ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 19:32 IST
Last Updated 4 ಜೂನ್ 2017, 19:32 IST
ಬಿಜೆಪಿ ಯುವ ಮೋರ್ಚಾ ಸೈಕಲ್ ಜಾಥಾ
ಬಿಜೆಪಿ ಯುವ ಮೋರ್ಚಾ ಸೈಕಲ್ ಜಾಥಾ   

ಬೆಂಗಳೂರು: ಬಿಜೆಪಿ ಕೆ.ಆರ್‌.ಪುರ ಕ್ಷೇತ್ರ ಘಟಕದ ಯುವ ಮೋರ್ಚಾ ಕಾರ್ಯಕರ್ತರು ವಿಶ್ವ ಪರಿಸರ ದಿನದ ಪ್ರಯುಕ್ತ ಹೊರಮಾವು ಅಗರ ಕೆರೆಯಿಂದ ಕೆ.ಆರ್‌.ಪುರದ ವೆಂಗಯ್ಯನಕೆರೆಯವರೆಗೂ ಸೈಕಲ್ ಜಾಥಾ ನಡೆಸಿದರು.

ಮುಖಂಡ ನಂದೀಶ್ ರೆಡ್ಡಿ ಮಾತನಾಡಿ, ‘ವಾಹನಗಳಿಂದ ಪರಿಸರ ಹಾಳಾಗಿದೆ. ಇದಕ್ಕೆ ಪರ್ಯಾಯವಾಗಿ ಸೈಕಲ್‌ ಬಳಸುವ ಮೂಲಕ ಮಾಲಿನ್ಯ ನಿಯಂತ್ರಣ ಮಾಡಬೇಕು. ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.