ADVERTISEMENT

ಬಿಯರ್‌ ಬಾಟಲಿಯಿಂದ ಇರಿದು ಕೊಲೆ

ಘಟನೆ ಬಳಿಕ ಆರೋಪಿಗಳು ಪರಾರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:09 IST
Last Updated 23 ಏಪ್ರಿಲ್ 2018, 19:09 IST
ಬಿಯರ್‌ ಬಾಟಲಿಯಿಂದ ಇರಿದು ಕೊಲೆ
ಬಿಯರ್‌ ಬಾಟಲಿಯಿಂದ ಇರಿದು ಕೊಲೆ   

ಬೆಂಗಳೂರು: ಟ್ಯಾನರಿ ರಸ್ತೆಯ ’ಪ್ರಿಯಾ‘ ಬಾರ್‌ನಲ್ಲಿ ಚಂದ್ರಶೇಖರ್‌ (32) ಎಂಬುವರನ್ನು ದುಷ್ಕರ್ಮಿಗಳು ಸೋಮವಾರ ಕೊಲೆ ಮಾಡಿದ್ದಾರೆ.

ಡಿ.ಜೆ.ಹಳ್ಳಿ ಸಮೀಪದ ಎ.ಕೆ. ಕಾಲೊನಿ ನಿವಾಸಿಯಾಗಿದ್ದ ಚಂದ್ರಶೇಖರ್‌, ಪೇಂಟರ್‌ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಬಾರ್‌ಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಕೆ.ಜೆ.ಹಳ್ಳಿ ಠಾಣೆಯ ಪೊಲೀಸರು ತಿಳಿಸಿದರು.

ಟೇಬಲ್‌ ಮೇಲೆ ಕುಳಿತು ಚಂದ್ರಶೇಖರ್‌ ಮದ್ಯ ಕುಡಿಯುತ್ತಿದ್ದರು. ಪಾನಮತ್ತರಾಗಿದ್ದ ಕೆಲ ಯುವಕರು, ಅವರ ಬಳಿ ಬಂದು ಜಗಳ ತೆಗೆದಿದ್ದರು. ಆಗ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಅದೇ ವೇಳೆ ದುಷ್ಕರ್ಮಿಯೊಬ್ಬ, ಒಡೆದ ಬಿಯರ್‌ ಬಾಟಲಿಯಿಂದ ಹೊಟ್ಟೆಗೆ ಇರಿದಿದ್ದ. ತೀವ್ರ ರಕ್ತಸ್ರಾವವಾಗಿ ಚಂದ್ರಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದರು.

ADVERTISEMENT

ಮೃತರಿಗೆ ಪರಿಚಯವಿರುವವರೇ ಕೃತ್ಯ ಎಸಗಿರುವ ಅನುಮಾನವಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.