ಬೆಂಗಳೂರು: ಬೆಂಗಳೂರಿನಲ್ಲಿ ಶನಿವಾರ ಮಳೆ ಮತ್ತೆ ಆರ್ಭಟಿಸಲು ಆರಂಭಿಸಿದ್ದು ಹಲವೆಡೆ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ದಟ್ಟಣೆ ಹೆಚ್ಚಿದೆ.
ಭಾರಿ ಮಳೆಗೆ ನಗರದ ಕಾವೇರಿ ಜಂಕ್ಷನ್, ಮೇಕ್ರಿ ವೃತ್ತ, ಹೆಬ್ಬಾಳದಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ.
ಶನಿವಾರವಾದ್ದರಿಂದ ವಾಹನಗಳು ವಿರಳವಾಗಿವೆಯಾದರೂ ಸಂಜೆ ವೇಳೆಗೆ ವಾರಂತ್ಯದ ಸುತ್ತಾಟಕ್ಕೆ ತೆರಳುವ ಜನರಿಗೆ ತಡೆಯೊಡ್ಡಿದೆ.
ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ರಸ್ತೆಗಳೆ ರಾಜಕಾಲುವೆಯಂತಾಗಿ ಮಾರ್ಪಟ್ಟಿವೆ.
ಹೊಸೂರು ರಸ್ತೆಯಲ್ಲಿ ನೀರು ತುಂಬಿದ್ದು, ಜನರು ಅದರಲ್ಲೆ ಸಂಚರಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.