ADVERTISEMENT

‘ಭಾರತದಲ್ಲಿ ಗೋಪ್ಯತೆ ಹಕ್ಕಿನ ವಿಕಾಸ’: ವಿಚಾರ ಸಂಕಿರಣ 31ರಂದು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 20:12 IST
Last Updated 28 ಅಕ್ಟೋಬರ್ 2017, 20:12 IST

ಬೆಂಗಳೂರು: ಕಾನೂನು ಅಧ್ಯಯನ ಸಂಸ್ಥೆಯು ಇದೇ 31ರಂದು ವಿಜಯಾ ಕಾಲೇಜಿನ ಸಭಾಂಗಣದಲ್ಲಿ ‘ಭಾರತದಲ್ಲಿ ಗೋಪ್ಯತೆ ಹಕ್ಕಿನ ವಿಕಾಸ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದೆ.

‌ಈ ಕುರಿತು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಪ್ರಾಂಶುಪಾಲರಾದ ಪ್ರೀತಿ ಎಸ್‌. ದೇಸಾಯಿ, ‘ಗೋಪ್ಯತೆ ಹಕ್ಕು ಮೂಲಭೂತ ಹಕ್ಕು ಹೌದು ಅಲ್ಲವೊ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಆ ಕುರಿತು ಚರ್ಚಿಸುವ ಉದ್ದೇಶದಿಂದ ವಿಚಾರ ಸಂಕಿರಣ ಹಮ್ಮಿಕೊಂಡಿದ್ದೇವೆ. ದೇಶದ ವಿವಿಧ ಕಾಲೇಜುಗಳ ಕಾನೂನು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಉತ್ತಮ ಲೇಖನಕ್ಕೆ ಪ್ರಶಸ್ತಿ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT