ಬೆಂಗಳೂರು: ಜಯನಗರದ ಭೈರಸಂದ್ರ ಕೆರೆಯನ್ನು ಅತಿಕ್ರಮಣಕಾರರಿಂದ ರಕ್ಷಿಸುವ ನಿಟ್ಟಿನಲ್ಲಿ ಕೆರೆಯ ಸುತ್ತ ಬೇಲಿ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
`ಬಿಡಿಎ~ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್, ಸ್ಥಳೀಯ ಶಾಸಕ ಹೇಮಚಂದ್ರ ಸಾಗರ್ ಭಾಗವಹಿಸಿದ್ದರು. ೆರೆ ಸ್ಥಿತಿಗತಿ ಕುರಿತು ಜನವರಿಯಲ್ಲಿ ಪರಿಶೀಲನೆ ನಡೆಸಿದ್ದ ಅನಂತಕುಮಾರ್ ಮತ್ತು ಸಾಗರ್ ಅವರು, ಬಿಡಿಎ ಸಿದ್ಧಪಡಿಸಿರುವ ಯೋಜನೆಯ ಅನ್ವಯ ಬೇಲಿ ನಿರ್ಮಿಸಲಾಗುವುದು ಮತ್ತು ಕೊಳಚೆ ನೀರು ಕೆರೆಗೆ ಸೇರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.