ADVERTISEMENT

ಮರ ಬಿದ್ದು ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:49 IST
Last Updated 25 ಮೇ 2018, 19:49 IST
ಮರದ ಕೆಳಗೆ ಸಿಲುಕಿರುವ ಟಾಟಾ ಏಸ್.
ಮರದ ಕೆಳಗೆ ಸಿಲುಕಿರುವ ಟಾಟಾ ಏಸ್.   

ನೆಲಮಂಗಲ: ತಾಲ್ಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಚಲಿಸುತ್ತಿದ್ದ ಟಾಟಾಏಸ್‌ ವಾಹನದ ಮೇಲೆ ಮರ ಬಿದ್ದು ಚಾಲಕ ಮೃತಪಟ್ಟಿದ್ದಾನೆ.

ಕನಕಪುರದ ಸೋರೇಕಾಯಿದೊಡ್ಡಿ ನಿವಾಸಿ ಪ್ರಸನ್ನ(35) ಮೃತಪಟ್ಟ ದುರ್ದೈವಿ. ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್‌ ಬಳಿ ಘಟನೆ ನಡೆದಿದೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT