
ಪ್ರಜಾವಾಣಿ ವಾರ್ತೆಬೆಂಗಳೂರು: `ಬೆಂಗಳೂರಿನ ಜೋಡಿ ರಸ್ತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೆಸರಿಡಬೇಕು~ ಎಂದು ಮಾಜಿ ಶಾಸಕ ಎನ್. ರಾಜಣ್ಣ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.
`ನಗರದಲ್ಲಿ ಜೋಡಿ ರಸ್ತೆ ನಿರ್ಮಾಣದಿಂದ ಹಲವು ಸಮಸ್ಯೆಗಳು ಬಗೆಹರಿ ದಿವೆ. ಮೊದಲಿದ್ದ ಸಂಚಾರ ಅವ್ಯವಸ್ಥೆ ಸರಿಯಾಗಿ ಜನರೆಲ್ಲ ಉಸಿರು ಬಿಡುವಂತಾಗಿದೆ. ಆಗುತ್ತಿದ್ದ ಅಪ ಘಾತಗಳು ತಪ್ಪಿದಂತಾಗಿದೆ. ಇವರು ಸಲ್ಲಿಸಿದ ಸೇವೆಯ ನೆನಪಿಗಾಗಿ ದೇವೇಗೌಡರ ಹೆಸರಿಡಬೇಕು~ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನವಕರ್ನಾಟಕ ಯುವಶಕ್ತಿಯ ರಾಜ್ಯ ಘಟಕ ಅಧ್ಯಕ್ಷ ಕೆ.ಎನ್.ಲಿಂಗೇಗೌಡ, ಕುವೆಂಪು ನಗರ ಒಕ್ಕಲಿಗರ ಜಾಗೃತ ವೇದಿಕೆ ಅಧ್ಯಕ್ಷ ಕೆ.ಸಿ.ಗಂಗಾಧರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.