ಬೆಂಗಳೂರು: ಟಿಬೆಟನ್ ಯೂತ್ ಕಾಂಗ್ರೆಸ್ ವತಿಯಿಂದ ನಗರದ ಬನಪ್ಪ ಉದ್ಯಾನದಲ್ಲಿ ಸೋಮವಾರ 55ನೇ ರಾಷ್ಟ್ರೀಯ ಟಿಬೆಟನ್ ಬಂಡಾಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕುರಿತು ಮಾತನಾಡಿದ ಯೂತ್ ಕಾಂಗ್ರೆಸ್ ಸಂಘಟನೆಯ ಸಂಚಾಲಕಿ ತೀನ್ಲೆ ಚುಕ್ಕಿ, ‘ಚೀನಿಯರ ದಬ್ಬಾಳಿಕೆ, ಚಿತ್ರಹಿಂಸೆ, ಸೆರೆಮನೆವಾಸ ಹಾಗೂ ಮರಣ ದಂಡನೆಯಂತಹ ಹೇಯ ಕೃತ್ಯದಿಂದಾಗಿ 1.2 ಮಿಲಿಯನ್ಗಿಂತಲೂ ಹೆಚ್ಚು ಟಿಬೆಟನ್ರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಇಲ್ಲಿಯವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ಟಿಬೆಟನ್ ಧರ್ಮಕೇಂದ್ರಗಳು ನಾಶಗೊಂಡಿವೆ. ಇದಲ್ಲದೇ ಚೀನಿಯರ ಅತಿಯಾದ ಗಣಿಗಾರಿಕೆ, ಅರಣ್ಯನಾಶ, ಸೇನಾನೆಲೆ ಹಾಗೂ ರಸ್ತೆ ನಿರ್ಮಾಣದಂತಹ ಕೃತ್ಯಗಳಿಂದಾಗಿ ಅಲ್ಲಿನ ಶ್ರೀಮಂತ ಪರಿಸರ ನಾಶವಾಗಿದೆ’ ಎಂದರು.
‘ಚೀನಾ- ಟಿಬೆಟ್ ನಡುವಿನ ಈ ಸಂಘರ್ಷಮಯ ವಾತಾವರಣ ತಿಳಿಗೊಳ್ಳಬೇಕು. ಟಿಬೆಟನ್ನರು ಚೀನಾದ ಧೋರಣೆಯನ್ನು ಖಂಡಿಸುತ್ತೇವೆ. ನ್ಯಾಯದ ಪರ ನಿಂತಿರುವ ವಿಶ್ವದ ಶಾಂತಿಪ್ರಿಯ ದೇಶಗಳು, ಸಂಘಟನೆಗಳು ಚೀನಾ ಆಡಳಿತದ ಮೇಲೆ ಒತ್ತಡ ಹೇರಬೇಕು.
ಟಿಬೆಟನ್ರ ಮೂಲ ಮಾನವ ಹಕ್ಕುಗಳನ್ನು ಗೌರವಿಸಬೇಕು, ಎಲ್ಲಾ ಟಿಬೆಟನ್ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಟಿಬೆಟನ್ಗಳ ಸಮಸ್ಯೆ ಬಗೆಹರಿಸಲು ಧರ್ಮಗುರು ದಲೈಲಾಮಾ ಅವರ ಪ್ರಸ್ತಾವನೆಯನ್ನು ಚೀನಾ ಆಡಳಿತ ಸ್ವೀಕರಿಸಬೇಕು’ ಎಂದು ಯೂತ್ ಕಾಂಗ್ರೆಸ್ ಸಂಘಟನೆ ಸಂಚಾಲಕಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.