ADVERTISEMENT

ರಿಯಲ್‌ ಎಸ್ಟೇಟ್‌ ಉದ್ಯಮಿ ಸೆರೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2016, 19:57 IST
Last Updated 4 ಜುಲೈ 2016, 19:57 IST
ರಿಯಲ್‌ ಎಸ್ಟೇಟ್‌ ಉದ್ಯಮಿ ಸೆರೆ
ರಿಯಲ್‌ ಎಸ್ಟೇಟ್‌ ಉದ್ಯಮಿ ಸೆರೆ   

ಬೆಂಗಳೂರು: ನಿವೇಶನ ನೀಡು ವುದಾಗಿ ಹೇಳಿ ಮಾಜಿ ಸೈನಿಕ ರಿಂದ ಹಣ ಪಡೆದು ವಂಚಿ ಸಿದ ಆರೋಪದಡಿ ‘ದುರ್ಗಾ ಪ್ರಾಪರ್ಟಿಸ್‌ ಲ್ಯಾಂಡ್‌ ಡೆವಲಪರ್ಸ್‌ ಅಂಡ್‌ ಪ್ರಮೋಟರ್ಸ್‌ ಸಂಸ್ಥೆ’ ಮಾಲೀಕ ಶ್ರೀನಿವಾಸ್‌ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ನಿವೃತ್ತ ಸೈನಿಕರು ನೀಡಿದ ದೂರಿನ ಮೇರೆಗೆ ಸಹಕಾರನಗರದಲ್ಲಿ ವಾಸವಿದ್ದ ಆರೋಪಿ ಶ್ರೀನಿವಾಸ್‌ಗೌಡನನ್ನು ಬಂಧಿ ಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಬಾಗಲೂರು ಪೊಲೀಸರು ತಿಳಿಸಿದರು.

‘ಸೈನಿಕ್‌ ವೆಲ್‌ಫೇರ್‌್ ಆರ್ಗನೈ ಜೇಷನ್‌ ಇಂಡಿಯಾ ಕಂಪೆನಿಯು ನಿವೇ ಶನ ಹಾಗೂ ಮನೆ ಕೊಡಿಸುವುದಾಗಿ ಹೇಳಿ  ನಿವೃತ್ತ ಸೈನಿಕರಿಂದ ₹1.9 ಕೋಟಿ ಪಡೆದು, ಅದೇ ಹಣವನ್ನು ಶ್ರೀನಿವಾಸ್‌ ಗೌಡನಿಗೆ  ನೀಡಿತ್ತು’ ಎಂದು ಮಾಹಿತಿ ನೀಡಿದರು.

‘ಹಣ ಪಡೆದಿದ್ದ ಆರೋಪಿಯು ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಮಾರೇನಹಳ್ಳಿ ಗ್ರಾಮದಲ್ಲಿ ದುರ್ಗಾ ನಾರ್ತ್‌ ಸಿಟಿ ಫೇಸ್‌–1 ಬಡಾವಣೆ ನಿರ್ಮಿಸಿ ಅಲ್ಲಿಯೇ ನಿವೇಶನ ನೀಡುವುದಾಗಿ ಹೇಳಿದ್ದ. ಆದರೆ ಕೆಲ ತಿಂಗಳ ಬಳಿಕ ನಿವೇಶನ ನೀಡಲು ಶ್ರೀನಿವಾಸ್‌ಗೌಡ ನಿರಾಕರಿಸಿದ್ದ’ ಎಂದು    ಪೊಲೀಸರು ವಿವರಿಸಿದರು.

ಸುನೀಲ್‌ಕುಮಾರ್‌ ಸಾಹು ಎಂಬು ವರಿಂದಲೂ ₹30 ಲಕ್ಷ ಪಡೆದು ಆರೋ ಪಿಯು ವಂಚಿಸಿದ್ದ ಬಗ್ಗೆ  ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.