ADVERTISEMENT

ವನಕಲ್ಲು ವೃದ್ಧಾಶ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:05 IST
Last Updated 3 ಅಕ್ಟೋಬರ್ 2012, 19:05 IST

ಬೆಂಗಳೂರು:  ನಗರದ ದಾಬಸ್‌ಪೇಟೆಯ ವನಕಲ್ಲುವಿನಲ್ಲಿ ವೃದ್ಧಾಶ್ರಮವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗೆ ಉದ್ಘಾಟಿಸಿದರು.

ವನಕಲ್ಲು ಕ್ಷೇತ್ರದ ಬಸವ ರಮಾನಂದ ಸ್ವಾಮೀಜಿ, ಜಯಮಹಲ್ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಭೋಜರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜಯಮಹಲ್ ಲಯನ್ಸ್ ಕ್ಲಬ್ ವತಿಯಿಂದ 12 ಕೊಠಡಿಗಳುಳ್ಳ ಕಟ್ಟಡವನ್ನು ವನಕಲ್ಲು ಕ್ಷೇತ್ರಕ್ಕೆ ದಾನ ಮಾಡಲಾಗಿತ್ತು. ಇದಕ್ಕೆ 65 ಲಕ್ಷ ರೂಪಾಯಿ ವೆಚ್ಚ ತಗುಲಿದೆ. 30ಕ್ಕೂ ಅಧಿಕ ವೃದ್ಧರು ಇಲ್ಲಿ ವಾಸ್ತವ್ಯ ಹೂಡಬಹುದು ಎಂದು ಲಯನ್ಸ್ ಕ್ಲಬ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.