ADVERTISEMENT

ವಿಜಯಶ್ರೀ ಸಬರದಗೆ ಕದಳಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 20:14 IST
Last Updated 2 ಅಕ್ಟೋಬರ್ 2017, 20:14 IST
ವಿಜಯಶ್ರೀ ಸಬರದ ಅವರಿಗೆ ಗೊ.ರು.ಚನ್ನಬಸಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆ ಅಧ್ಯಕ್ಷೆ ಪ್ರಮೀಳಾ ಶಂಕರ್, ಹೆಲ್ಪ್ ಎಜುಕೇಷನ್ ಎ ಚೈಲ್ಡ್ ಸಂಘದ ಟ್ರಸ್ಟಿ ನಂದಾ ಪ್ರಸಾದ್, ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಸ್ವಾಮೀಜಿ ಮಹಾಂತಲಿಂಗ ಶಿವಾಚಾರ್ಯ, ವೇದಿಕೆಯ ಕಾರ್ಯದರ್ಶಿ ಪ್ರಮೀಳಾ ಗರಡಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಸವರಾಜ ಸಾದರ ಇದ್ದಾರೆ –ಪ್ರಜಾವಾಣಿ ಚಿತ್ರ
ವಿಜಯಶ್ರೀ ಸಬರದ ಅವರಿಗೆ ಗೊ.ರು.ಚನ್ನಬಸಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆ ಅಧ್ಯಕ್ಷೆ ಪ್ರಮೀಳಾ ಶಂಕರ್, ಹೆಲ್ಪ್ ಎಜುಕೇಷನ್ ಎ ಚೈಲ್ಡ್ ಸಂಘದ ಟ್ರಸ್ಟಿ ನಂದಾ ಪ್ರಸಾದ್, ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಸ್ವಾಮೀಜಿ ಮಹಾಂತಲಿಂಗ ಶಿವಾಚಾರ್ಯ, ವೇದಿಕೆಯ ಕಾರ್ಯದರ್ಶಿ ಪ್ರಮೀಳಾ ಗರಡಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಸವರಾಜ ಸಾದರ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕದಳಿ ಮಹಿಳಾ ವೇದಿಕೆಯ 2017ನೇ ಸಾಲಿನ ‘ಕದಳಿ’ ಪ್ರಶಸ್ತಿಯನ್ನು ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ವಿಜಯಶ್ರೀ ಸಬರದ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹ 5,000 ನಗದು ಬಹುಮಾನ ಹಾಗೂ ಸ್ಮರಣಿಕೆ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಗೊ.ರು.ಚನ್ನಬಸಪ್ಪ, ‘ಇಂದಿನ ಸಮಾಜವು ತಾನು ನಡೆದಂತೆಯೇ ನಡೆಯಬೇಕು ಎಂಬ ನಿರೀಕ್ಷೆಯನ್ನು ಹೊಂದಿದೆ. ಹೀಗಾಗಿ, ಏನನ್ನೂ ಪ್ರಶ್ನೆ ಮಾಡದ ಸ್ಥಿತಿಯಲ್ಲಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಪ್ರ‌ಶ್ನೆ ಮಾಡಿದರೆ ಏನಾಗುತ್ತದೆ ಎಂದು ಇತ್ತೀಚಿನ ದಿನಗಳಲ್ಲಿ ನೋಡಿದ್ದೇವೆ. ಕೊಲೆಗಾರರಿಗೆ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯಾದರೇನು, ಪತ್ರಕರ್ತೆ ಗೌರಿ ಲಂಕೇಶ್ ಆದರೇನು. ಭಯಾನಕ, ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿರುವ ನಾವು ಎಚ್ಚರಗೊಂಡು ನಿರ್ಭೀತ ವಾತಾವರಣ ನಿರ್ಮಿಸಬೇಕಿದೆ’ ಎಂದರು.

‘ವಿಚಾರಧಾರೆಗಳನ್ನು ಪರಸ್ಪರ ಆತ್ಮೀಯವಾಗಿ ವಿನಿಮಯ ಮಾಡಿಕೊಳ್ಳಲಾಗದ, ಅನೀತಿ ಬಗ್ಗೆ ಚಕಾರವೆತ್ತದ ವಿಕೃತಮಯ ಹಾಗೂ ವಿವೇಚನಹೀನ ಈ ವ್ಯವಸ್ಥೆಯಿಂದ ಬಿಡುಗಡೆ ಹೊಂದಬೇಕಿದೆ. ಅದಕ್ಕಾಗಿ 12ನೇ ಶತಮಾನದ ಶರಣ–ಶರಣೆಯರ ವಿಚಾರಧಾರೆಗಳತ್ತ ಮುಖಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.