ADVERTISEMENT

ಶ್ವಾನಗಳ ಆರೈಕೆ: ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: ಹಿಮಾಲಯ ಔಷಧ ಕಂಪೆನಿಯ ಪ್ರಾಣಿ ಆರೋಗ್ಯ ವಿಭಾಗದ ವತಿಯಿಂದ ಕಂಪೆನಿಯ ಆವರಣದಲ್ಲಿ ಗುರುವಾರ ಶ್ವಾನಗಳ ಆರೈಕೆ ಕುರಿತು `ಪೆಟ್ ಟುಗೆದರ್' ಎಂಬ ವಿಚಾರಗೋಷ್ಠಿಯನ್ನು ನಡೆಯಿತು.

ಕಾರ್ಯಕ್ರಮದಲ್ಲಿ ಹಿಮಾಲಯ ಔಷಧ ಕಂಪೆನಿಯ ಉತ್ಪನ್ನ ಘಟಕದ ವ್ಯವಸ್ಥಾಪಕರಾದ ಪಶು ವೈದ್ಯ ಡಾ.ರಿತೇಶ್ ಸೂದ್ ಅವರು ಶ್ವಾನಗಳ ನೈಸರ್ಗಿಕ ಶುಶ್ರೂಷೆಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು. ವೃತ್ತಿಪರ ಶ್ವಾನ ಪಾಲಕಿ ಸಾಯಿ ಚಿಟ್ನಿಸ್ ಶ್ವಾನಗಳನ್ನು ಸಾಕುವ ವಿಧಾನವನ್ನು ತಿಳಿಸಿದರು. 

ಡಾ.ವಿಶ್ವನಾಥ್ ಭಾಗವತ್ ಡಾ.ಸೂದ್ ಶ್ವಾನಗಳಿಗೆ  ಉಚಿತ ಆರೋಗ್ಯ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.