ADVERTISEMENT

ಸಾಲಮನ್ನಾಗೆ ಒಂದು ವಾರ ಗಡುವು : ಯಡಿಯೂರಪ್ಪ

‌ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಮೇ 2018, 12:18 IST
Last Updated 28 ಮೇ 2018, 12:18 IST
ಸಾಲಮನ್ನಾಗೆ ಒಂದು ವಾರ ಗಡುವು : ಯಡಿಯೂರಪ್ಪ
ಸಾಲಮನ್ನಾಗೆ ಒಂದು ವಾರ ಗಡುವು : ಯಡಿಯೂರಪ್ಪ   

ಬೆಂಗಳೂರು: ಒಂದು ವಾರದಲ್ಲಿ ರೈತರ ಸಾಲ ಮನ್ನಾ ಮಾಡದಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿರೋದ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ರೈತರ ಸಾಲ ಮನ್ನಾ ಮಾಡಬೇಕೆಂದು ಇಂದು ರಾಜ್ಯಾದ್ಯಂತ ಬಿಜೆಪಿಯಿಂದ ಕರೆ ಕೊಟ್ಟಿದ್ದು, ಬಂದ್‌ ‌ಯಶಸ್ವಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. 

ಒಂದು ವಾರದವರೆಗೆ ಕಾದು ನೋಡುತ್ತೇವೆ. ನಂತರವೂ ರೈತರ ಸಾಲ ಮನ್ನಾವಾಗಿಲ್ಲವೆಂದರೆ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಬಂದ್‌ಗೆ ನಾವು ಯಾವುದೇ ಸಂಘಟನೆಗಳ ಬೆಂಬಲ ಕೋರಿರಲಿಲ್ಲ ಆದರೂ ಯಶಸ್ವಿಯಾಗಿದೆ. ಸರ್ಕಾರ ಬಂದ್ ಹತ್ತಿಕ್ಕಲು ಪೊಲೀಸ್ ಬಲ ಬಳಸಿದ್ದಾರೆ ಎಂದು ಟೀಕಿಸಿದರು. ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರೆಯುತ್ತಿವೆ. ಕಳೆದ ಮೂರು ನಾಲ್ಕು ದಿನಗಳಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.