
ಪ್ರಜಾವಾಣಿ ವಾರ್ತೆಬೆಂಗಳೂರು: ಕರ್ನಾಟಕ ನಾಗರಿಕ ಹಕ್ಕುಗಳ ವೇದಿಕೆ ಹಾಗೂ ಮಾಜಿ ಸೈನಿಕರ ಸಂಘವು ಭಾನುವಾರ ಮಹಾತ್ಮ ಗಾಂಧಿ ರಸ್ತೆಯ ಕ್ವೀನ್ಸ್ ಪ್ರತಿಮೆ ಎದುರು ಸೈನಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ರ್ಯಾಲಿ ನಡೆಸಿದರು.
ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಜಿ.ಕಾಮತ್ ಅವರು, ‘ನಿರ್ಬಂಧಿತ ಸ್ಥಳಗಳಲ್ಲಿರುವ ಸೈನಿಕರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಸೈನಿಕರೇ ಈ ದೇಶದ ಶಕ್ತಿಯಾಗಿದ್ದಾರೆ’ ಎಂದರು.
‘ಸರ್ಕಾರ ಸೈನ್ಯದ ಬೇಕು–ಬೇಡಗಳನ್ನು ತಿಳಿಯಲು ಅಸಮರ್ಥವಾಗಿದೆ. ಅವರಿಗೆ ಸರಿಯಾದ ತರಬೇತಿ ಮತ್ತು ಅವಶ್ಯಕವಿರುವ ಉಪಕರಣಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.