
ಬಾನಿನಲ್ಲಿ ಹಾರಾಡುತ್ತಿದ್ದ ಹದ್ದೊಂದು ಬಿಸಿಲಿನ ತಾಪದಿಂದ ಬಾಯಾರಿಕೆ ತಾಳಲಾಗದೆ ಭಾನುವಾರ ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿ ಮುಂಭಾಗದಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನದ ಮೇಲೆ ಇಳಿಯಿತು. ನೀರಿಲ್ಲದೆ ನಿತ್ರಾಣವಾಗಿದ್ದ ಆ ಬಾನಾಡಿಗೆ ಹಾರಲೂ ಆಗುತ್ತಿರಲಿಲ್ಲ. ದಾರಿಹೋಕರೊಬ್ಬರು ಬಾಟಲಿ ಮೂಲಕ ಹಾಕಿದ ನೀರು ಗುಟುಕರಿಸಿದ ಹದ್ದು, ಬಾಯಾರಿಕೆ ತಣಿಸಿಕೊಂಡ ಬಳಿಕ ಅಲ್ಲಿಂದ ಮತ್ತೆ ಆಕಾಶದತ್ತ ಚಿಮ್ಮಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.