ಬೆಂಗಳೂರು: ‘ಲೇಖಕಿ ವೆಂಡಿ ಡೊನಿಜರ್ ಅವರು ಬರೆದಿರುವ ‘ಆನ್ ಹಿಂದುಯಿಸಂ’ ಕೃತಿಯನ್ನು ಕೂಡಲೇ ನಿಷೇಧಿಸಬೇಕು’ ಎಂದು ಶಿಕ್ಷಾ ಬಚಾವೋ ಆಂದೋಲನ ಸಮಿತಿಯ ದೀನಾನಾಥ ಬಾತ್ರ ಅವರು ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕೃತಿಯಲ್ಲಿ ಹಿಂದುತ್ವದ ಕಾಮ ಸಂಬಂಧಿತ ಅಂಶಗಳನ್ನು ಪ್ರಚೋದನಕಾರಿಯಾಗಿ ಪ್ರಚುರಪಡಿಸಿದ್ದಾರೆ.
ಅವರ ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಅಶ್ಲೀಲ ರೀತಿಯಲ್ಲಿ ಬಿಂಬಿಸಿದ್ದು, ಹಿಂದೂ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ಬಿಂಬಿಸಲಾಗಿದೆ. ಇಲ್ಲವಾದರೆ, ಕಾನೂನಾತ್ಮಕ ಹೋರಾಟ ನಡೆಸಲಾಗುವುದು’ ಎಂದು ದೀನಾನಾಥ ಬಾತ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.