ADVERTISEMENT

‘ಕೃಷಿಯಲ್ಲಿ ಉದ್ಯಮ ಸೂತ್ರ ಅಳವಡಿಕೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:54 IST
Last Updated 14 ಮಾರ್ಚ್ 2014, 19:54 IST

ಬೆಂಗಳೂರು: ‘ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಆಗಬೇಕಿದೆ. ಜೊತೆಗೆ ಆಹಾರ ಪದಾರ್ಥಗಳು ವ್ಯರ್ಥ ಆಗುವುದನ್ನು ತಡೆಗಟ್ಟಬೇಕು. ಗ್ರಾಹಕರಿಗೆ ಬೆಳೆಗಾರರು ಇನ್ನಷ್ಟು ಹತ್ತಿರವಾಗಲು ವಿತರಣಾ ಸರಪಳಿ ಸಮರ್ಪಕ ನಿರ್ವಹಣೆ ಆಗ ಬೇಕು’ ಎಂದು ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಡಾ.ಜಿ.ಕೆ.ವಸಂತ ಕುಮಾರ್‌ ತಿಳಿಸಿದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋ ಚಾಮ್‌) ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ನಡೆದ ‘ಶೀತಲೀಕರಣದ ಸರಪಳಿ ಅಭಿ ವೃದ್ಧಿ–ಪ್ರವೃತ್ತಿ ಹಾಗೂ ಸವಾಲು’ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಚಟುವಟಿಕೆಗಾಗಿ ನಾವು ಈಗಾಗಲೇ ನೈಸರ್ಗಿಕ ಸಂಪನ್ಮೂಲವನ್ನು ಅಧಿಕ ಪ್ರಮಾಣದಲ್ಲಿ ಬಳಸಿದ್ದೇವೆ. ನಿಯಮಿತ ಪ್ರದೇಶದಲ್ಲಿ ಕಡಿಮೆ ನೀರು ಬಳಸಿ ಅಧಿಕ ಇಳುವರಿ ಪಡೆಯುವತ್ತ ಗಮನ ಹರಿಸಬೇಕು. ಕೃಷಿ ಉತ್ಪನ್ನಗಳು ಹಾಳಾಗದಂತೆ ಶೀತಲೀಕರಣ ಮಾಡುವ ಬಗ್ಗೆ ಗಮನ ಹರಿಸಬೇಕು. ಕೃಷಿಯಲ್ಲಿ ಉದ್ಯಮದ ಸೂತ್ರವನ್ನು ಅಳವಡಿಸಿ ಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಅಸೋಚಾಮ್‌ ದಕ್ಷಿಣ ವಲಯ ಪರಿಷತ್‌ ಸಹ ಮುಖ್ಯಸ್ಥ ಜೆ.ಕ್ರಾಸ್ತಾ ಮಾತನಾಡಿ, ‘ಈಗ ಕೃಷಿ ಕ್ಷೇತ್ರದ ಚಿತ್ರಣ ಬದಲಾಗಿದೆ. ಲಕ್ಷಾಂತರ ರೂಪಾಯಿ ಲಾಭ ಪಡೆಯುವ ಇದ್ದಾರೆ. ಆಧುನಿಕ ತಂತ್ರಜ್ಞಾನದ ನೆರವು ಪಡೆದು ಕೃಷಿ ಯನ್ನು ಲಾಭದಾಯಕ ಮಾಡಿಕೊಳ್ಳ ಬೇಕಿದೆ’ ಎಂದು ಅವರು ಹೇಳಿದರು.

ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಸಂಸ್ಕರಣಾ ಮಿಷ ನ್‌ನ ಸಲಹೆ ಗಾರರಾದ ಡಾ.ಬಿ.ಎಂ. ಲೀಲಾವತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.