ADVERTISEMENT

‘ಗಿರಡ್ಡಿ ವಿಮರ್ಶೆ ಆಳವಾದ ಓದಿಗೆ ಪ್ರೇರಣೆ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 10:49 IST
Last Updated 17 ಮೇ 2017, 10:49 IST
ಬೆಂಗಳೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಕವಿ ಚೆನ್ನವೀರ ಕಣವಿ ಅವರು ‘ಡಾ.ಜಿಎಸ್‌ಎಸ್‌’ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಜಿಎಸ್‌ಎಸ್‌ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಶೂದ್ರ ಶ್ರೀನಿವಾಸ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಎಸ್‌ಎಸ್‌ ಅವರ ಪುತ್ರಿ ಜಯಂತಿ, ಡಾ. ಜಿಎಸ್‌ಎಸ್‌ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ವೆಂಕಟೇಶಮೂರ್ತಿ ಮತ್ತು ಲೇಖಕಿ ಎಂ.ಎಸ್‌. ಆಶಾದೇವಿ ಚಿತ್ರದಲ್ಲಿದ್ದಾರೆ  	–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಕವಿ ಚೆನ್ನವೀರ ಕಣವಿ ಅವರು ‘ಡಾ.ಜಿಎಸ್‌ಎಸ್‌’ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಜಿಎಸ್‌ಎಸ್‌ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಶೂದ್ರ ಶ್ರೀನಿವಾಸ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಎಸ್‌ಎಸ್‌ ಅವರ ಪುತ್ರಿ ಜಯಂತಿ, ಡಾ. ಜಿಎಸ್‌ಎಸ್‌ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ವೆಂಕಟೇಶಮೂರ್ತಿ ಮತ್ತು ಲೇಖಕಿ ಎಂ.ಎಸ್‌. ಆಶಾದೇವಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಬಂಧಗಳಲ್ಲಿ ಜೀವ ಪರವಾದ ಸೃಷ್ಟಿಶೀಲತೆ, ಕೃತಿ ನಿಷ್ಠತೆಯ ಜತೆಗೆ ಅರ್ಥ ಪರಂಪರೆಯನ್ನು ಶೋಧಿ­ಸುವ ನಂಬಿಕೆ ಮತ್ತು ಬದ್ಧತೆಯು ಗಿರಡ್ಡಿ ಗೋವಿಂದರಾಜ ಅವರ ಬರವಣಿಗೆಯಲ್ಲಿ ಕಂಡುಬರುತ್ತದೆ’ ಎಂದು ವಿಮರ್ಶಕಿ ಎಂ.ಎಸ್‌.ಆಶಾ­ದೇವಿ ಹೇಳಿದರು.

ಡಾ.ಜಿ.ಎಸ್ಸೆಸ್‌ ವಿಶ್ವಸ್ತ ಮಂಡಲಿ­ಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ಗಿರಡ್ಡಿ ಗೋವಿಂದರಾಜ ಅವರಿಗೆ ‘ಡಾ.ಜಿ.ಎಸ್ಸೆಸ್‌’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.

‘ಗಿರಡ್ಡಿ ಅವರ ವಿಮರ್ಶೆ ಇನ್ನಷ್ಟು ಆಳವಾದ ಓದಿ­ಗೆ ಪ್ರೇರೆಪಿಸುವ ಮೂಲ­ಕ ಹೊಸ ಹೊಳಹು­ಗಳನ್ನು ಪಡೆದು­ಕೊಳ್ಳಲು ನೆರವಾಗುತ್ತದೆ’ ಎಂದರು.
‘ಕೃತಿ ನಿಷ್ಠೆಯನ್ನು ವೃತ್ತಿ ನಿಷ್ಠೆಯಂತೆ ಪಾಲಿಸಿದ ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಗಿರಡ್ಡಿ ಅವರು ನಿದ್ದೆ ಮತ್ತು ಎಚ್ಚರದಲ್ಲಿಯೂ ಆಚೀಚೆ ಚಲಿಸದ ಬದ್ಧತೆ ಉಳ್ಳವರು’ ಎಂದು ಅಭಿಪ್ರಾಯ­ಪಟ್ಟರು.

ಕವಿ ಚೆನ್ನವೀರ ಕಣವಿ ಮಾತನಾಡಿ, ‘ನಿಷ್ಠುರ ವಿಮರ್ಶೆಯ, ನೈತಿಕ ಧೈರ್ಯ ಇರುವ ವಿಮರ್ಶಕ­ರಲ್ಲಿ ಗಿರಡ್ಡಿ ಗೋವಿಂದ­ರಾಜ ಪ್ರಮುಖರು. ಸಾಂಪ್ರ­ದಾಯಿಕ ಹಠ ಮತ್ತು ಆಧುನಿಕ ಸಿನಿಕತನ ಇಲ್ಲದ ಅವರು ವಿಮರ್ಶೆ­ಯಲ್ಲಿ ಅಂತರ್‌ಮುಖತ್ವ ಮತ್ತು ಸಾಮಾಜಿಕತ್ವವನ್ನು ಎತ್ತಿ ಹಿಡಿದಿದ್ದಾರೆ’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಿರಡ್ಡಿ ಅವರು, ‘ಕನ್ನಡದ ವಿಮರ್ಶೆ ಸಂದಿಗ್ಧದಲ್ಲಿದೆ. ದಿನದಿಂದ ದಿನಕ್ಕೆ  ಹೆಚ್ಚು ಕ್ಲಿಷ್ಟವಾಗುತ್ತಿದೆ. ಈಗ ವಿಮರ್ಶೆಯ ಬಗೆಗೆ ಮರುವಿವೇಚನೆ ಮಾಡಬೇಕಾದ ಅಗತ್ಯವಿದೆ’ ಎಂದು ಹೇಳಿದರು. ‘ವಿಮರ್ಶೆಯ ಸೊಬಗು ಹೆಚ್ಚಿಸಿ, ಹೆಚ್ಚು ಜನರು ಓದುವಂತೆ, ಹೆಚ್ಚು ಜನರನ್ನು ತಲುಪುವಂತೆ ಮಾಡುವ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.