ಕೃಷ್ಣರಾಜಪುರ: ‘ರಾಷ್ಟ್ರದಲ್ಲಿ ನಿರ್ಭೀತಿ ಯ ವಾತಾವರಣ ಸೃಷ್ಟಿಯಲ್ಲಿ ಯುವಕರು ಪಾಲುದಾರರಾಗಬೇಕು. ಯುವಶಕ್ತಿಯು ರಾಷ್ಟ್ರ ನಿರ್ಮಾಣದಲ್ಲಿ ಶಕ್ತಿಯುತವಾಗಿ ಹೊರಬರಬೇಕು. ಈ ನಿಟ್ಟಿನಲ್ಲಿ ಯುವಕರು ಸಂಘಟಿತರಾಗಬೇಕು’ ಎಂದು ಬಜರಂಗದಳದ ರಾಜ್ಯ ಘಟಕದ ಸಂಚಾಲಕ ಸೂರ್ಯನಾರಾಯಣ ಸಲಹೆ ನೀಡಿದರು.
ಬಸವನಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಸಂದ್ರ ಸಾಧನ ಕೇಂದ್ರ ಅಧ್ಯಕ್ಷ ಚಂದ್ರೇಶಾನಂದಜೀ ಕಾರ್ಯಕ್ರಮ ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.