ಬೆಂಗಳೂರು: ‘ಮನುಷ್ಯನ ಏಳಿಗೆಗೆ ವಿಜ್ಞಾನದಷ್ಟೆ ಕಲೆಯೂ ಮುಖ್ಯ’ ಎಂದು ಭೌತ ವಿಜ್ಞಾನ ಪ್ರೊ. ಆರ್ಥರ್ ಐಸೆನ್ಕ್ರಾಫ್ಟ್ ಪ್ರತಿಪಾದಿಸಿದರು.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಜ್ಞಾನ, ಕಲೆ, ಸಾಹಿತ್ಯದೊಂದಿಗೆ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ’ ಕುರಿತು ಉಪನ್ಯಾಸ ನೀಡಿದರು.
‘ಮಾನವನು ವಿಕಾಸವಾಗಲು ವಿಜ್ಞಾನದಷ್ಟೇ ಕಲೆಯೂ ಮುಖ್ಯವಾಗುತ್ತದೆ. ವಿಜ್ಞಾನವನ್ನು ಕಲೆಯಂತೆ ಕಲಿಸಿದಾಗ ವಿದ್ಯಾರ್ಥಿಗಳು ವಿಜ್ಞಾನದತ್ತ ಹೆಚ್ಚು ಒಲವು ಬೆಳೆಸಿಕೊಳ್ಳುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.