ADVERTISEMENT

‘ಸಚಿವರ ನಿರ್ಲಕ್ಷ್ಯದಿಂದ ರೂ.1 ಸಾವಿರ ಕೋಟಿ ಖೋತಾ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:45 IST
Last Updated 4 ಜನವರಿ 2014, 19:45 IST

ಬೆಂಗಳೂರು: ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇಂದ್ರ ಸರ್ಕಾರದ  ರೂ.1 ಸಾವಿರ ಕೋಟಿ ಅನು­ದಾನ ಈ ವರ್ಷ ದೊರೆತಿಲ್ಲ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು.

ಈ ರೀತಿಯ ಅನುದಾನ ಸ್ಥಗಿತವಾ­ಗುತ್ತಿರುವುದರಿಂದ ಶಾಲಾ ಕೊಠಡಿಗಳ ನಿರ್ಮಾಣವಾಗುತ್ತಿಲ್ಲ. ಉಪಕರಣಗಳ ಖರೀದಿಗೆ ಶಿಕ್ಷಕರಿಗೆ ದೊರೆಯುತ್ತಿದ್ದ ರೂ.500 ನಿಲ್ಲಿಸಲಾಗಿದೆ.  ಹಿರಿಯ ಪ್ರಾಥ­ಮಿಕ ಶಾಲೆಗಳಿಗೆ ಕಂಪ್ಯೂಟರ್‌ ನೀಡಿಲ್ಲ ಎಂದು ಶನಿವಾರ ಪತ್ರಿಕಾ­ಗೋಷ್ಠಿಯಲ್ಲಿ ದೂರಿದರು. ಶಿಕ್ಷಕರು ವಿಷ ಕುಡಿಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಶಿಕ್ಷಣ ಸಚಿವರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.

ಕಾಂಗ್ರೆಸ್ಸೀಕರಣ
ನ್ಯಾಯ ಬೆಲೆ ಅಂಗಡಿ­ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನಂತೆ ಜಾಗೃತ ಸಮಿತಿಗಳನ್ನು ರಚಿಸಬೇಕು ಎಂದು ಸರ್ಕಾರ ಆದೇಶ ಹೊರ­ಡಿಸಿದೆ. ಇದು ನ್ಯಾಯಬೆಲೆ ಅಂಗ­ಡಿ­ಗಳನ್ನು ಕಾಂಗ್ರೆಸ್ಸೀ­ಕ­­ರ­ಣಗೊಳಿಸುವ ಹುನ್ನಾರ­ವಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.