ಬೆಂಗಳೂರು: ಕ್ಷಯ ರೋಗ ಪತ್ತೆ ಅಭಿಯಾನ ಆರಂಭವಾದ ವಾರದೊಳಗೆ ರಾಜ್ಯದಲ್ಲಿ 1,150 ಮಂದಿಗೆ ಕ್ಷಯ ರೋಗವಿರುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ.
ಇದೇ 15ರಂದು ಇಲಾಖೆಯು ಈ ಅಭಿಯಾನಕ್ಕೆ ಚಾಲನೆ ನೀಡಿತ್ತು. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರ ತಂಡ ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರ ತಪಾಸಣೆ ನಡೆಸಿದ್ದಾರೆ. 1,150 ಪ್ರಕರಣಗಳ ಪೈಕಿ, ಮೈಸೂರು (131), ಬಳ್ಳಾರಿ (110) ಹಾಗೂ ಬೆಳಗಾವಿ (107) ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.