ಬೆಂಗಳೂರು: ಪೀಣ್ಯ ದಾಸರಹಳ್ಳಿ ಸಮೀಪದ ಬಾಗಲಗುಂಟೆ ಮತ್ತು ಮಲ್ಲಸಂದ್ರದಲ್ಲಿ ಇದೇ 15ರಿಂದ 17ರವರೆಗೆ ಮಾರಮ್ಮ, ಜುಂಜಪ್ಪ ಮತ್ತು ಆಂಜನೇಯಸ್ವಾಮಿಯ ವೈಭವದ ಜಾತ್ರಾ ಮಹೋತ್ಸವ ಜರುಗಲಿದೆ.
15ರಂದು ಬಾಗಲಗುಂಟೆಯಲ್ಲಿ ಕುರ್ಜಮರ ಎತ್ತುವುದು, ಪ್ರಮುಖ ಬೀದಿಗಳಲ್ಲಿ ಮಾರಮ್ಮದೇವಿಯ ಮೆರವಣಿಗೆ, ರಾತ್ರಿ 11 ಗಂಟೆಗೆ ಅಗ್ನಿಕುಂಡಕ್ಕೆ ಬೆಂಕಿ ಹಚ್ಚುವ ಕಾರ್ಯಕ್ರಮ ನಡೆಯಲಿದೆ.
16ರಂದು ಬೆಳಿಗ್ಗೆ ಮಲ್ಲಸಂದ್ರದಲ್ಲಿ ಆಂಜನೇಯಸ್ವಾಮಿಗೆ ಬೆಲ್ಲದಾರತಿ, ದೊಡ್ಡದಾರತಿಯೊಂದಿಗೆ ಬಾಗಲಗುಂಟೆ ಮಾರಮ್ಮ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಸೇವೆ, ಅಲಗುಸೇವೆ, ಅಗ್ನಿಕುಂಡದಲ್ಲಿ ನಡೆಯುವುದು, ಸಂಜೆ ಪಳೇಕಮ್ಮ ಮತ್ತು ಮುತ್ತುರಾಯಸ್ವಾಮಿಗೆ ಬೆಲ್ಲದಾರತಿ ಮಾಡಲಾಗುತ್ತದೆ.
17ರಂದು ಬೆಳಿಗ್ಗೆ ಮಲ್ಲಸಂದ್ರದಲ್ಲಿ ಜುಂಜಪ್ಪಸ್ವಾಮಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಶಾಸಕ ಎಸ್.ಮುನಿರಾಜು ಜಾತ್ರೆಗೆ ಚಾಲನೆ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.