ADVERTISEMENT

₹ 1.60 ಕೋಟಿ ವಂಚನೆ; ಸಿಸಿಬಿಗೆ ಮಾಹಿತಿ ನೀಡಿದ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 19:58 IST
Last Updated 31 ಅಕ್ಟೋಬರ್ 2020, 19:58 IST
 ಎಸ್‌. ನಾರಾಯಣ್‌
 ಎಸ್‌. ನಾರಾಯಣ್‌   

ಬೆಂಗಳೂರು: ‘₹ 1.60 ಕೋಟಿ ವಂಚನೆ ಆಗಿದೆ’ ಎಂಬುದಾಗಿ ಇತ್ತೀಚೆಗಷ್ಟೇ ದೂರು ನೀಡಿದ್ದ ನಿರ್ದೇಶಕ ಎಸ್‌.ನಾರಾಯಣ, ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ಶನಿವಾರ ನೀಡಿದರು.

ಸಿಸಿಬಿ ಡಿಸಿಪಿ ಅವರಿಗೆ ದೂರು ನೀಡಿದ್ದ ನಾರಾಯಣ, ‘ಸಿನಿಮಾವೊಂದರ ನಿರ್ಮಾಣ ಹೆಸರಿನಲ್ಲಿ ಪಾಲುದಾರರಿಂದ ವಂಚನೆ ಆಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಕೋರಿದ್ದರು. ದೂರು ಆಧರಿಸಿ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ನಾರಾಯಣ್ ಅವರಿಗೆ ಸೂಚಿಸಿದ್ದರು. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಶನಿವಾರ ಬಂದಿದ್ದ ನಾರಾಯಣ್, ಮಾಹಿತಿ ನೀಡಿ ಹೊರಟು ಹೋದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.