ಬೆಂಗಳೂರು: ದೊಮ್ಮಲೂರು ಲೇಔಟ್ನಲ್ಲಿ ದುಷ್ಕರ್ಮಿಗಳು ಸೋಮವಾರ ಬೆಳಿಗ್ಗೆ ಜಿ.ವೈ. ರವೀಂದ್ರನ್ (38) ಎಂಬುವರ ಮೈಮೇಲೆ ತುರಿಕೆ ಪೌಡರ್ ಎರಚಿ ₹ 2 ಲಕ್ಷ ನಗದು ದೋಚಿದ್ದಾರೆ.
ದೊಮ್ಮಲೂರಿನ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ. ನೌಕರರಿಗೆ ವೇತನ ನೀಡುವ ಸಲುವಾಗಿ ಕಾರ್ಪೊರೇಷನ್ ಬ್ಯಾಂಕ್ಗೆ ಹೋಗಿ ₹2 ಲಕ್ಷ ಡ್ರಾ ಮಾಡಿದ್ದರು. ಅವರು ಹೊರಬರುತ್ತಿದ್ದಂತೆಯೇ ಅಪರಿಚಿತರು ಅವರ ಕುತ್ತಿಗೆ ಮೇಲೆ ಪೌಡರ್ ಹಾಕಿದ್ದಾರೆ.
ರವೀಂದ್ರನ್ ಬೈಕ್ನಿಂದ ಕೆಳಗಿಳಿದು ಕುತ್ತಿಗೆ ತೊಳೆದುಕೊಳ್ಳಲು ಮುಂದಾದಾಗ ಹಣವಿರುವ ಬ್ಯಾಗ್ ಕದ್ದೊಯ್ದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.