ಬೆಂಗಳೂರು: ಸ್ನೇಹಿತನ ಜೊತೆ ಮಾತನಾಡುವುದಾಗಿ ಹೇಳಿ ಮೊಬೈಲ್ ಪಡೆದು ಪರಾರಿಯಾಗಿದ್ದ ಆರೋಪಿ ಪವನ್ ಎಂಬುವವರು, ಮೊಬೈಲ್ ಮಾಲೀಕರನ್ನು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
‘ಜಾರ್ಖಂಡ್ನ ದೇವಬ್ರತ್ ಸಿಂಗ್ ಎಂಬುವವರು ದೂರು ನೀಡಿದ್ದರು’ ಎಂದು ಯಶವಂತ ಪುರ ಪೊಲೀಸರು ಹೇಳಿದರು.
‘ಮೊಬೈಲ್ ಪಡೆದಿದ್ದ ಆರೋಪಿ, ಮಾತನಾಡುವ ಸೋಗಿನಲ್ಲೇ ಪರಾರಿ ಯಾಗಿ, ಮೊಬೈಲ್ ಲಾಕ್ ತೆರೆದು ಪರಿಶೀಲಿಸಿದ್ದ. ಸ್ನೇಹಿತೆ ಜೊತೆಗೆ ದೇವ ಬ್ರತ್ ತೆಗೆಸಿಕೊಂಡಿದ್ದ ಫೋಟೊ ಹಾಗೂ ವಿಡಿಯೊ ನೋಡಿದ್ದ. ಅವುಗಳನ್ನೇ ಇಟ್ಟುಕೊಂಡು ದೇವಬ್ರತ್ ಅವರ ತಂದೆ ತಾಯಿಗೆ ಫೋನ್ ಮಾಡಿದ್ದ. ₹ 50 ಸಾವಿರ ಕೊಡುವಂತೆ ಒತ್ತಾಯಿಸಿದ್ದ. ಹಣ ಕೊಡದಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.