ಬೆಂಗಳೂರು: ಮದ್ಯದ ಅಮಲಿನಲ್ಲಿ ಬೀದಿನಾಯಿ ಮೇಲೆ ಹಲ್ಲೆ ನಡೆಸಿ ಆ್ಯಸಿಡ್ ದಾಳಿ ಮಾಡಿದ್ದ ಐವರ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆರೋಪಿಗಳು ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಬೀದಿ ಬದಿ ಮಲಗಿರುತ್ತಿದ್ದ ನಾಯಿಗಳು ಬೊಗಳಿದಾಗ ಅವುಗಳನ್ನು ಹಿಂಸಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ತನ್ನ ಮೇಲೂ ಹಲ್ಲೆಗೆ ಮುಂದಾಗಿದ್ದರು ಎಂದು 50 ವರ್ಷದ ಮಹಿಳೆಯೊಬ್ಬರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಅಂಬೇಡ್ಕರ್ ನಗರದಲ್ಲಿ ಇದೇ 4ರ ರಾತ್ರಿ 10 ಗಂಟೆಗೆ ಆರೋಪಿಗಳು ನಾಯಿಯ ಮೇಲೆ ಆ್ಯಸಿಡ್ ಹಾಗೂ ಪೆಟ್ರೋಲ್ ಸುರಿದು ಅಮಾನವೀಯವಾಗಿ ವರ್ತಿಸಿದ್ದರು ಎಂದೂ ಅವರು ವಿವರಿಸಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.