ADVERTISEMENT

ರೈತರ ಕೃಷಿ ಅಧ್ಯಯನ ಪ್ರವಾಸ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 19:21 IST
Last Updated 6 ಫೆಬ್ರುವರಿ 2019, 19:21 IST
ಕೃಷಿ ಅಧ್ಯಯನ ಪ್ರವಾಸಕ್ಕೂ ಮುನ್ನ ನರಸೀಪುರದ ಆತ್ಮಾರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ಕೃಷಿ ಅಧ್ಯಯನ ಪ್ರವಾಸಕ್ಕೂ ಮುನ್ನ ನರಸೀಪುರದ ಆತ್ಮಾರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.   

ದಾಬಸ್‌ಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಸೋಂಪುರ, ತ್ಯಾಮಗೊಂಡ್ಲು ಹೋಬಳಿ ಹಾಗೂ ನೆಲಮಂಗಲ ತಾಲ್ಲೂಕಿನ ಸಂಸ್ಥೆಯ ಆಸಕ್ತ ರೈತ ಸದಸ್ಯರಿಗೆ ಏರ್ಪಡಿಸಿದ ಮೂರು ದಿನದ ರಾಜ್ಯಮಟ್ಟದ ಕೃಷಿ ಅಧ್ಯಯನ ಪ್ರವಾಸ ಬುಧವಾರ ಆರಂಭಗೊಂಡಿತು.

ನರಸೀಪುರದ ಆತ್ಮಾರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಲಾಯಿತು. ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ ರೈತರು ಕೈಗೊಂಡಿರುವ ಸಾವಯವ ಕೃಷಿ, ಸಮಗ್ರ ಕೃಷಿಗಳ ಜೊತೆಗೆ ಸ್ವ ಉದ್ಯೋಗ ಆಧಾರಿತ ನಾಟಿ ಕೋಳಿ ಸಾಕಾಣಿಕೆ, ಅಣಬೆ ಬೆಳೆಗಳ ಕುರಿತು ಪ್ರವಾಸದಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿರುವ ಈ ಭಾಗದ ರೈತರಿಗೆ, ಕೃಷಿ ಹಾಗೂ ಪೂರಕ ಉಪಕಸುಬುಗಳ ಪರಿಚಯ ನಡೆಯಲಿದೆ.

ಪ್ರವಾಸದ ವೇಳೆ ಅಲ್ಲಿನ ರೈತರಿಂದ ಮಾಹಿತಿ ಪಡೆದು, ನಾವು ನಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ರೈತರಾದ ರಂಗನಾಥ, ರಾಜಣ್ಣ ಇತರರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.