ADVERTISEMENT

ಆಟೊ ಚಾಲಕ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 21:10 IST
Last Updated 24 ಜೂನ್ 2023, 21:10 IST

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕ ಮೋಹನ್ ಕುಮಾರ್ (37)  ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ನಿವಾಸಿ ಮೋಹನ್, ಹಲವು ವರ್ಷಗಳಿಂದ ಆಟೊ ಚಾಲನೆ ಮಾಡುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರು‌ ಮಕ್ಕಳ ಜೊತೆ ವಾಸವಿದ್ದಾರೆ.

‘ಮಕ್ಕಳ‌ ಶಾಲೆ ಶುಲ್ಕ‌ ಭರಿಸುವುದಕ್ಕಾಗಿ‌ ಮೋಹನ್ ಹಣ ಹೊಂದಿಸುತ್ತಿದ್ದರು. ಆದರೆ, ಹಣ ಸಿಕ್ಕಿರಲಿಲ್ಲ. ದುಡಿಮೆಯೂ‌ ಕಡಿಮೆ ಆಗಿತ್ತು. ಇದರಿಂದ ನೊಂದ ಅವರು, ತಿಗಣೆ ಔಷಧಿ ಕುಡಿದು ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು' ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.