ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:25 IST
Last Updated 16 ಜನವರಿ 2020, 20:25 IST

ಬೆಂಗಳೂರು: ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಅಯ್ಯಪ್ಪ ಸ್ವಾಮಿ ಭಕ್ತರು ರಕ್ಷಿಸಿದ್ದಾರೆ. ವ್ಯಕ್ತಿಯ ಹೆಸರು ಮತ್ತು ಹಿನ್ನೆಲೆ ಲಭ್ಯವಾಗಿಲ್ಲ.

ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊಸಕೆರೆಹಳ್ಳಿಯ ನೈಸ್ ರಸ್ತೆಯ ಮೇಲ್ಸೇತುವೆಯಿಂದ ವ್ಯಕ್ತಿಯೊಬ್ಬ ಕೆಳಗೆ ಜಿಗಿಯಲು ಯತ್ನಿಸುತ್ತಿದ್ದ. ಅದೇ ರಸ್ತೆ ಮೂಲಕ ಶಬರಿಮಲೆಗೆ ಹೋಗುತ್ತಿದ್ದ ಹೋಗಲು ಇರುಮುಡಿ ಧರಿಸಿದ್ದ ಅಯ್ಯಪ್ಪ ಭಕ್ತರು ಅದನ್ನು ಗಮನಿಸಿದ್ದರು.

ಮೇಲ್ಸೇತುವೆಯಿಂದ ಕೆಳಗೆ ಜಿಗಿಯದಂತೆ ಅವರು ಹಲವು ಬಾರಿ ಮನವಿ ಮಾಡಿದರೂ, ಅದನ್ನು ನಿರ್ಲಕ್ಷಿಸಿದ ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಅಷ್ಟೊತ್ತಿಗಾಗಲೇ ಅಯ್ಯಪ್ಪ ಭಕ್ತರ ಸಾಲಿನಲ್ಲಿ ಆನಂದ್ ಮತ್ತು ಅವರ ತಂಡದ ಕೆಲವರು ಆತನಿಗೆ ತಿಳಿಯದಂತೆ ಮೇಲ್ಸೇತುವೆ ಮೇಲೆ ಹೋಗಿ ಆತನನ್ನು ರಕ್ಷಿಸಿದ್ದಾರೆ. ಬಳಿಕ ವ್ಯಕ್ತಿಯನ್ನು ಬ್ಯಾಟರಾಯನಪುರ ಪೊಲೀಸರಿಗೆ ಒಪ್ಪಿಸಿದರು.

ADVERTISEMENT

ಕುಡಿದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.