ADVERTISEMENT

₹10 ಕೋಟಿ ದೇಣಿಗೆ ಕೊಟ್ಟವರ ಹೆಸರು ಗ್ರಾಮಕ್ಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:36 IST
Last Updated 14 ಆಗಸ್ಟ್ 2019, 19:36 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಪ್ರವಾಹ ಪೀಡಿತ ಗ್ರಾಮಗಳ ಪುನರ್‌ ನಿರ್ಮಾಣಕ್ಕೆ ₹10 ಕೋಟಿಗೂ ಹೆಚ್ಚು ದೇಣಿಗೆ ನೀಡುವ ಉದ್ಯಮಗಳ ಹೆಸರನ್ನೇ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬುಧವಾರ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿ, ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇವರ ನೆರವಿಗೆ ಕೈಗಾರಿಕೋದ್ಯಮಿಗಳು ಮುಂದಾಗಬೇಕು. ಉದಾತ್ತವಾಗಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.

ಕ್ರೆಡಾಯ್ ₹3 ಕೋಟಿ, ಟೊಯೋಟಾ ₹ 2 ಕೋಟಿ, ಟಿ.ವಿ.ಎಸ್‌. ಮೋಟಾರು ಸಂಸ್ಥೆ ₹1 ಕೋಟಿ ಹಾಗೂ ಲೋಗೋ‌ಸ್‌ಗ್ರೂಪ್‌ ₹ 25 ಲಕ್ಷ ದೇಣಿಗೆ ನೀಡುವುದಾಗಿ ಸಭೆಯಲ್ಲಿ ಪ್ರಕಟಿಸಿದವು.

ADVERTISEMENT

ಆಗಸ್ಟ್ 14 ರಂದು 67 ಚೆಕ್‌ಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲುಪಿದ್ದು, ಇವುಗಳ ಮೊತ್ತ ₹38 ಲಕ್ಷದಷ್ಟಿದೆ. ದಾನಿಗಳು ಡಿ.ಡಿ ಹಾಗೂ ಆನ್‌ಲೈನ್‌ ಮೂಲ ನೀಡಿದ ಮೊತ್ತವೂ ಸೇರಿ ಗುರುವಾರ ಒಂದೇ ದಿನ ₹1.39 ಕೋಟಿ ಸ್ವೀಕೃತಿಯಾಗಿದೆ. ಆ.9ರಿಂದ ಒಟ್ಟು ₹4.09 ಕೋಟಿ ಪರಿಹಾರ ನಿಧಿಗೆ ಸಂದಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.