ADVERTISEMENT

ತಗ್ಗಿದ ಪ್ರವಾಹ: ಮನೆಯತ್ತ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:24 IST
Last Updated 15 ಆಗಸ್ಟ್ 2019, 19:24 IST

ಬೆಂಗಳೂರು: ರಾಜ್ಯದ ಎಲ್ಲ ನದಿಗಳಲ್ಲೂ ಪ್ರವಾಹ ಇಳಿಯುತ್ತಿರುವುದರಿಂದ; ಸಂತ್ರಸ್ತ ಶಿಬಿರಗಳಿಂದ ಜನ ತಮ್ಮ ಮನೆಗಳಿಗೆ ವಾಪಸಾಗುತ್ತಿದಾರೆ.

ಮಳೆ ಮತ್ತು ಪ್ರವಾಹದಿಂದಾಗಿ ಈವರೆಗೆ ಒಟ್ಟು 64 ಮಂದಿ ಮೃತಪಟ್ಟಿದ್ದು, 14 ಮಂದಿ ಕಾಣೆಯಾಗಿ
ದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಇಲ್ಲಿಯವರೆಗೆ6,97,948 ಜನರನ್ನು ಪ್ರವಾಹದಿಂದ ಸಂರಕ್ಷಿಸಲಾಗಿದೆ.51,460 ಜಾನುವಾರುಗಳನ್ನು ರಕ್ಷಿಸಲಾಗಿದೆ. 943 ಸಂತ್ರಸ್ತ ಶಿಬಿರಗಳಲ್ಲಿ, 3,57,243 ಮಂದಿ ಆಶ್ರಯ ಪಡೆದಿದ್ದಾರೆ. 22 ಜಿಲ್ಲೆಗಳ 103 ತಾಲ್ಲೂಕುಗಳು ಪ್ರವಾಹದಿಂದ ತೊಂದರೆಗೆ ಒಳಗಾಗಿವೆ. 5.35 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆ ನಷ್ಟ ಆಗಿದೆ. 71,234 ಮನೆಗಳು ಹಾನಿಗೀಡಾಗಿವೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.