ಬೆಂಗಳೂರು: ರಾಷ್ಟ್ರವ್ಯಾಪಿ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ನಗರದಲ್ಲೂ ಬ್ಯಾಂಕ್ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ್ದ ನೌಕರರು, ಬ್ಯಾಂಕ್ಗಳ ಖಾಸಗೀಕರಣ ಖಂಡಿಸಿ ಘೋಷಣೆಗಳನ್ನು ಕೂಗಿದರು.
‘2 ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವುದಾಗಿ ಬಜೆಟ್ನಲ್ಲಿ ಹೇಳಿದ್ದ ಕೇಂದ್ರ ಸರ್ಕಾರ, ಇದೀಗ 4 ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿದೆ. ಈ ಕ್ರಮವನ್ನು ಖಂಡಿಸುತ್ತೇವೆ’ ಎಂದು ಪ್ರತಿಭಟನಕಾರರು ಹೇಳಿದರು.
‘ಬ್ಯಾಂಕ್ಗಳ ಖಾಸಗೀಕರಣ ಮಾಡಿದರೆ, ಸಾರ್ವಜನಿಕರ ಹಣವೆಲ್ಲವೂ ಖಾಸಗಿಯವರ ಪಾಲಾಗಲಿದೆ. ದೇಶದ ಆರ್ಥಿಕ ವ್ಯವಸ್ಥೆಗೆ ಮುಳುವಾಗಲಿದೆ. ಜನರ ಹಣಕ್ಕೆ ಯಾವುದೇ ಭದ್ರತೆಯೂ ಇರುವುದಿಲ್ಲ. ಹೀಗಾಗಿ, ಬ್ಯಾಂಕ್ ಖಾಸಗೀಕರಣ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಡಬೇಕು’ ಎಂದೂ ದೂರಿದರು.
ಮುಷ್ಕರದಿಂದಾಗಿ ನಗರದ ಬ್ಯಾಂಕ್ಗಳು ಬಂದ್ ಆಗಿದ್ದವು. ನಿರಂತರ ರಜೆ ನಂತರ ಸೋಮವಾರ ಬ್ಯಾಂಕ್ ತೆರೆಯಬಹುದೆಂದು ಬಂದಿದ್ದ ಗ್ರಾಹಕರಿಗೆ ನಿರಾಸೆ ಉಂಟಾಯಿತು. ಹಣ ಪಡೆಯಲು ಬಂದಿದ್ದ ಹಿರಿಯ ನಾಗರಿಕರು ಬ್ಯಾಂಕ್ ಎದುರು ಗಂಟೆಗಟ್ಟಲೇ ಕಾದು ವಾಪಸು ಹೋದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.