ADVERTISEMENT

ರಾಜ್ಯ ಸ್ವಾಯತ್ತತೆಯ ಹೋರಾಟ: ಬರಗೂರು ಸಲಹೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 20:34 IST
Last Updated 31 ಆಗಸ್ಟ್ 2019, 20:34 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ನಿಜವಾದ ನಾಡು–ನುಡಿ ನಿಷ್ಠರು ನಾಡಗೀತೆ, ನಾಡಧ್ವಜಗಳಾಚೆಗೂ ಚಿಂತಿಸಿ ಕ್ರಿಯಾಶೀಲರಾಗಬೇಕು. ರಾಜ್ಯದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಗಾಗಿ ಸಮಗ್ರ ಚಿಂತನೆಯ ಹೋರಾಟ ಕಟ್ಟಬೇಕು ಎಂದು ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ನಾಡ ಧ್ವಜ ಬೇಕು ಎಂಬ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿರುವ ಅವರು, ನಾಯಕರ ಹೇಳಿಕೆಗಳು ಭಾವಸಂಬಂಧಿ ಸಂಕೇತಗಳಿಗೆ ಸೀಮಿತವಾಗಬಾರದು, ರಾಜ್ಯ ಸ್ವಾಯತ್ತತೆಯ ಸ್ವಯಂ ಆತ್ಮಹತ್ಯೆ ಮತ್ತು ಕೇಂದ್ರ ಸರ್ಕಾರದಿಂದಾಗುವ ಸ್ವಾಯತ್ತತೆಯ ಹತ್ಯೆ ನಿಲ್ಲಬೇಕು ಎಂದು ಹೇಳಿದ್ದಾರೆ.

ಜಿಎಸ್‌ಟಿ, ನೀಟ್‌, ಹಿಂದಿ ಮೊದಲಾದ ಕ್ರಮಗಳ ಜತೆಗೆ ಕೇಂದ್ರ ಸರ್ಕಾರ ಆರ್‌ಟಿಐ ಮೊದಲಾದ ಕಾಯ್ದೆಗಳನ್ನು ಪರಿಷ್ಕರಿಸಿ ಕೆಲವು ಅಧಿಕಾರಗಳನ್ನು ಕೇಂದ್ರೀ ಕರಿಸಿಕೊಳ್ಳುತ್ತಿದೆ. ಇದರಿಂದ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.