ADVERTISEMENT

ಒಂದು ತಿಂಗಳಲ್ಲಿ ಬಿಬಿಎಂಪಿ ವಿಭಜನೆ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 17:50 IST
Last Updated 27 ಜೂನ್ 2025, 17:50 IST
ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನಿವೃತ್ತ ಐಎಎಸ್‌ ಅಧಿಕಾರಿಗಳಾದ ಎಸ್‌.ಆರ್‌. ಉಮಾಶಂಕರ್, ಜೈಕರ್ ಜರೋಮ್, ಬಿ.ಎಸ್. ಪಾಟೀಲ್ ಅವರಿಗೆ ಪ್ರದಾನ ಮಾಡಲಾಯಿತು. ಟಿ.ಎ. ಶರವಣ, ಮಹೇಶ್ವರ್‌ ರಾವ್‌,ಎನ್‌.ಎ. ಹ್ಯಾರಿಸ್‌, ಡಿ.ಕೆ. ಶಿವಕುಮಾರ್‌ ಉಪಸ್ಥಿತರಿದ್ದರು
ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನಿವೃತ್ತ ಐಎಎಸ್‌ ಅಧಿಕಾರಿಗಳಾದ ಎಸ್‌.ಆರ್‌. ಉಮಾಶಂಕರ್, ಜೈಕರ್ ಜರೋಮ್, ಬಿ.ಎಸ್. ಪಾಟೀಲ್ ಅವರಿಗೆ ಪ್ರದಾನ ಮಾಡಲಾಯಿತು. ಟಿ.ಎ. ಶರವಣ, ಮಹೇಶ್ವರ್‌ ರಾವ್‌,ಎನ್‌.ಎ. ಹ್ಯಾರಿಸ್‌, ಡಿ.ಕೆ. ಶಿವಕುಮಾರ್‌ ಉಪಸ್ಥಿತರಿದ್ದರು   

ಬೆಂಗಳೂರು: ‘ನಗರದ ಅಭಿವೃದ್ಧಿಗಾಗಿ ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್‌ ಬೆಂಗಳೂರು’ ರಚಿಸಿದ್ದೇವೆ. ಇದಕ್ಕೆ ಇನ್ನಷ್ಟು ಪ್ರದೇಶವನ್ನು ಸೇರಿಸಿ, ಒಂದು ತಿಂಗಳಲ್ಲಿ ಎಷ್ಟು ಪಾಲಿಕೆಗಳನ್ನು ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬಿಬಿಎಂಪಿಯ ಡಾ.ರಾಜ್‌ಕುಮಾರ್‌ ಗಾಜಿನ ಮನೆಯಲ್ಲಿ 53 ಸಾಧಕರಿಗೆ ‘ನಾಡ‍ಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಕೆಂಪೇಗೌಡ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ನಾವು ‘ಬ್ರ್ಯಾಂಡ್ ಬೆಂಗಳೂರು’ ಮಾಡುವ ಪರಿಕಲ್ಪನೆ ಇದೆ. ನಾವೆಲ್ಲರೂ ಸೇರಿ, ಬಲಿಷ್ಠ ಬೆಂಗಳೂರು, ಶಾಂತಿ ಬೆಂಗಳೂರು, ಗ್ರೀನ್ ಬೆಂಗಳೂರು, ಸುರಕ್ಷಿತ ಬೆಂಗಳೂರು ನಿರ್ಮಿಸೋಣ’ ಎಂದರು.

ADVERTISEMENT

‘ಸ್ಕೈ ಡೆಕ್ ನಿರ್ಮಾಣದ ವಿಷಯದಲ್ಲಿ ತಾಂತ್ರಿಕ ಅಂಶಗಳಿವೆ. ಇದಕ್ಕೆ ವಿಮಾನ ನಿಲ್ದಾಣ ಅಧಿಕಾರಿಗಳು ಒಪ್ಪಿಗೆ ನೀಡಬೇಕು. ವಿಮಾನ ನಿಲ್ದಾಣದಿಂದ 20 ಕಿ.ಮೀ ದೂರದಲ್ಲಿ ನಿರ್ಮಿಸಬೇಕಾಗುತ್ತದೆ. ನಮ್ಮ ಮೆಟ್ರೊಗೆ ಹತ್ತಿರದ ಜಾಗ ಹುಡುಕುತ್ತಿದ್ದು, ಶೀಘ್ರ ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.

ರಾಜೇಶ್ ರೈ ಚಟ್ಲ ದೀಪಕ್ ತಿಮ್ಮಯ  ಎಸ್‌.ಪಿ. ದಯಾನಂದ ಸಂಗೀತ ಕಟ್ಟಿ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.