ಬೆಳಗಾವಿ: ಹಿಂದಿ ಚಲನಚಿತ್ರ ‘ಪಠಾಣ್’ ಪ್ರದರ್ಶನ ವಿರೋಧಿಸಿ, ನಗರದ ಸ್ವರೂಪ ಚಿತ್ರಮಂದಿರದ ಮೇಲೆ ಮಂಗಳವಾರ ರಾತ್ರಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ನಾಲ್ವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
‘ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿವೆ. ಇಂಥ ಚಿತ್ರ ಪ್ರದರ್ಶಿಸಬಾರದು’ ಎಂದು ಯುವಕರು ಸಿನಿಮಾ ಥೇಟರ್ ಮುಂದೆ ಗಲಾಟೆ ಶುರು ಮಾಡಿದರು.
ಅದಾದ ಬಳಿಕವೂ ಸಾಯಂಕಾಲದ ಪ್ರದರ್ಶನ ಆರಂಭಿಸಿದ್ದರಿಂದ ಕಲ್ಲು ತೂರಾಟ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.