ADVERTISEMENT

ಜಲ ಮಂಡಳಿಯ ನೀರಿನ ಅದಾಲತ್ ನಾಳೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 20:36 IST
Last Updated 5 ಆಗಸ್ಟ್ 2025, 20:36 IST
   

ಬೆಂಗಳೂರು: ನೀರು ಮಂಡಳಿ ವಿವಿಧ ಉಪ ವಿಭಾಗಗಳಲ್ಲಿ ಆಗಸ್ಟ್‌ 7ರಂದು ಬೆಳಿಗ್ಗೆ 9.30ರಿಂದ 11 ಗಂಟೆಯವರೆಗೆ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.

ವಿವಿಧ ಉಪ ವಿಭಾಗಗಳಾದ ಪೂರ್ವ 1–1, ಪೂರ್ವ 2–1, ಆಗ್ನೇಯ -1, ಆಗ್ನೇಯ 4, ಪಶ್ಚಿಮ 1-1, ಪಶ್ಚಿಮ–2, ವಾಯವ್ಯ -1, ವಾಯವ್ಯ–3 ಕೇಂದ್ರ 1–1, ಈಶಾನ್ಯ–1 ಉತ್ತರ 1-1ಕ್ಕೆ ಸಂಬಂಧಿಸಿದಂತೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಅದಾಲತ್ ಸೇವಾ ಠಾಣೆಗಳಲ್ಲಿ ನೀರಿನ ಅದಾಲತ್ ನಡೆಯಲಿದೆ. ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ ಸಹಾಯವಾಣಿ 1916ಕ್ಕೆ
ಕರೆ ಮಾಡಿ ದೂರುಗಳನ್ನು ದಾಖಲಿಸ ಬಹುದು. 8762228888 ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT