ADVERTISEMENT

ಯೋಧರ ಕುಟುಂಬಗಳಿಗೆ ಸ್ಥೈರ್ಯ ತುಂಬಿದ ‘ಮಹಿಳಾ ಬೈಕ್ ರ‍್ಯಾಲಿ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:22 IST
Last Updated 26 ಜನವರಿ 2021, 19:22 IST
ಮಹಿಳಾ ಬೈಕ್ ರ‍್ಯಾಲಿಗೆ ಸಚಿವ ಎಂಟಿಬಿ ನಾಗರಾಜ್ ಚಾಲನೆ ನೀಡಿದರು. ಹರ್ಷಿಣಿ ವೆಂಕಟೇಶ್, ಸ್ವಾತಿ ಬಸೇಡಿಯಾ ಹಾಗೂ ಮಹಿಳಾ ಬೈಕರ್‌ಗಳು ಇದ್ದಾರೆ
ಮಹಿಳಾ ಬೈಕ್ ರ‍್ಯಾಲಿಗೆ ಸಚಿವ ಎಂಟಿಬಿ ನಾಗರಾಜ್ ಚಾಲನೆ ನೀಡಿದರು. ಹರ್ಷಿಣಿ ವೆಂಕಟೇಶ್, ಸ್ವಾತಿ ಬಸೇಡಿಯಾ ಹಾಗೂ ಮಹಿಳಾ ಬೈಕರ್‌ಗಳು ಇದ್ದಾರೆ   

ಬೆಂಗಳೂರು: ಮಹಿಳಾ ಬೈಕರ್‌ಗಳ ‘ಶಿ ಫಾರ್ ಸೊಸೈಟಿ’ ಸಂಸ್ಥೆಯು ಗಣರಾಜ್ಯೋತ್ಸವದ ಅಂಗವಾಗಿ ಗಡಿ ಕಾಯುವ ಯೋಧರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದೊಂದಿಗೆ ಬೆಂಗಳೂರಿನಿಂದ ಕೋಲಾರದವರೆಗೆ ಬೈಕ್ ರ‍್ಯಾಲಿಯನ್ನು ಮಂಗಳವಾರ ಆಯೋಜಿಸಿತ್ತು.

‘ಹೊಸಕೋಟೆಟೋಲ್ಬಳಿಇರುವಎಂ.ವಿ.ಜೆ.ಕಾಲೇಜುಆವರಣದಿಂದಮಹಿಳಾ ಬೈಕ್‌ ರ‍್ಯಾಲಿ ಆರಂಭವಾಯಿತು.ರ‍್ಯಾಲಿಯಲ್ಲಿಒಟ್ಟು75 ಮಹಿಳೆಯರು ಬೈಕ್‌ ಚಲಾಯಿಸಿದರು. ಕೆಲವು ಪುರುಷರೂ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಬೈಕ್‌ಗಳ ಸಾಲು 1 ಕಿ.ಮೀ ಉದ್ದದವರೆಗೂ ಮುಂದುವರಿದಿತ್ತು. ಸೇನಾ ಸಮವಸ್ತ್ರವನ್ನು ಹೋಲುವ ಟಿ–ಶರ್ಟ್‌ಗಳನ್ನು ಧರಿಸಿದ್ದ ನಾರಿಯರು, 30ಅಡಿಉದ್ದದರಾಷ್ಟ್ರಧ್ವಜ ಪ್ರದರ್ಶಿಸಿದರು’ಎಂದುಶಿಫಾರ್ಸೊಸೈಟಿ ಸಂಸ್ಥಾಪಕಿ ಹರ್ಷಿಣಿವೆಂಕಟೇಶ್ ತಿಳಿಸಿದರು.

‘ಕೋಲಾರದಲ್ಲಿ 5 ಸಾವಿರಕ್ಕೂಹೆಚ್ಚು ಯೋಧರ ಕುಟುಂಬಗಳಿವೆ. ಇವರಿಗೆ ವಿದ್ಯುತ್ ಸಮಸ್ಯೆ ಇರುವುದನ್ನು ಮನಗಂಡು ಅಗತ್ಯವಿರುವ ಯೋಧರ ಕುಟುಂಬಗಳಿಗೆ ಸೋಲಾರ್ ಪ್ಯಾನೆಲ್ ಕಿಟ್ ಉಚಿತವಾಗಿ ವಿತರಿಸಿದ್ದೇವೆ’ ಎಂದರು. ಕಾರ್ಗಿಲ್ಯುದ್ಧದಲ್ಲಿ ಎರಡೂಕಾಲುಗಳನ್ನುಕಳೆದುಕೊಂಡಿರುವಕ್ಯಾ.ನವೀನ್ನಾಗಪ್ಪ, ಸೇನೆಯ ಅಧಿಕಾರಿಸ್ವಾತಿಬಸೇಡಿಯಾ ಅವರೂ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.