ADVERTISEMENT

ವಾಕ್–ಶ್ರವಣ ಶಿಬಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 2:03 IST
Last Updated 16 ಆಗಸ್ಟ್ 2021, 2:03 IST
ಎಸ್‌.ಜಿ.ಎಸ್.ವಾಗ್ದೇವಿ ಸಂಸ್ಥೆಯ ವತಿಯಿಂದ ವಾಕ್‌ ಮತ್ತು ಶ್ರವಣ ಶಿಬಿರ ನಡೆಯಿತು.
ಎಸ್‌.ಜಿ.ಎಸ್.ವಾಗ್ದೇವಿ ಸಂಸ್ಥೆಯ ವತಿಯಿಂದ ವಾಕ್‌ ಮತ್ತು ಶ್ರವಣ ಶಿಬಿರ ನಡೆಯಿತು.   

ಬೆಂಗಳೂರು: ಗಿರಿನಗರದ ಎಸ್‌.ಜಿ.ಎಸ್.ವಾಗ್ದೇವಿ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನದ ಅಂಗವಾಗಿ ವಾಕ್‌ ಮತ್ತು ಶ್ರವಣ ಶಿಬಿರಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ವೈದ್ಯ ಕೃಷ್ಣಮೂರ್ತಿ ಅವರು ಧ್ವಜಾರೋಹಣ ನೆರವೇರಿಸಿ, ಶಿಬಿರ ಉದ್ಘಾಟಿಸಿದರು.

ಆ. 31ರವರೆಗೆಹಿರಿಯ ನಾಗರಿಕರಿಗೆ ಶ್ರವಣ ಸಾಮರ್ಥ್ಯ ತಪಾಸಣೆ ಹಾಗೂ ಶ್ರವಣೋಪಕರಣಗಳಿಂದ ಪರೀಕ್ಷೆಗಳುಉಚಿತವಾಗಿ ನಡೆಯಲಿವೆ. ಭಾನುವಾರ 32 ಮಂದಿಗೆ ತಪಾಸಣೆ ನಡೆಸಲಾಯಿತು.

ADVERTISEMENT

ಕೋವಿಡ್ ಮೊದಲ ಲಸಿಕೆ ಪಡೆದವರಿಗೆ ಶೇ 5ರಷ್ಟು ಹಾಗೂ ಎರಡನೇ ಲಸಿಕೆ ಪಡೆದವರಿಗೆ ಶೇ 10ರಷ್ಟು ರಿಯಾಯಿತಿ ಇರಲಿದೆ. ಸಂಸ್ಥೆಯಿಂದಲೇ ಶ್ರವಣೋಪಕರಣ ಖರೀದಿಸಿದರೆ, ಉಚಿತ ತಪಾಸಣೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.