ಬೆಂಗಳೂರು: ಗಿರಿನಗರದ ಎಸ್.ಜಿ.ಎಸ್.ವಾಗ್ದೇವಿ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನದ ಅಂಗವಾಗಿ ವಾಕ್ ಮತ್ತು ಶ್ರವಣ ಶಿಬಿರಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ವೈದ್ಯ ಕೃಷ್ಣಮೂರ್ತಿ ಅವರು ಧ್ವಜಾರೋಹಣ ನೆರವೇರಿಸಿ, ಶಿಬಿರ ಉದ್ಘಾಟಿಸಿದರು.
ಆ. 31ರವರೆಗೆಹಿರಿಯ ನಾಗರಿಕರಿಗೆ ಶ್ರವಣ ಸಾಮರ್ಥ್ಯ ತಪಾಸಣೆ ಹಾಗೂ ಶ್ರವಣೋಪಕರಣಗಳಿಂದ ಪರೀಕ್ಷೆಗಳುಉಚಿತವಾಗಿ ನಡೆಯಲಿವೆ. ಭಾನುವಾರ 32 ಮಂದಿಗೆ ತಪಾಸಣೆ ನಡೆಸಲಾಯಿತು.
ಕೋವಿಡ್ ಮೊದಲ ಲಸಿಕೆ ಪಡೆದವರಿಗೆ ಶೇ 5ರಷ್ಟು ಹಾಗೂ ಎರಡನೇ ಲಸಿಕೆ ಪಡೆದವರಿಗೆ ಶೇ 10ರಷ್ಟು ರಿಯಾಯಿತಿ ಇರಲಿದೆ. ಸಂಸ್ಥೆಯಿಂದಲೇ ಶ್ರವಣೋಪಕರಣ ಖರೀದಿಸಿದರೆ, ಉಚಿತ ತಪಾಸಣೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.