ADVERTISEMENT

ರಕ್ತದ ಆಕರಕೋಶ: ದಾನಿ ಭೇಟಿಯಾದ ಬಾಲಕಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 20:04 IST
Last Updated 4 ಫೆಬ್ರುವರಿ 2020, 20:04 IST
ರಕ್ತ ಕಾಂಡಕೋಶ ದಾನಿ ದೆಬೋಜ್ಯೋತಿರನ್ನು ಬಾಲಕಿ ಶಿಯಾ ಭೇಟಿ ಮಾಡಿದಳು
ರಕ್ತ ಕಾಂಡಕೋಶ ದಾನಿ ದೆಬೋಜ್ಯೋತಿರನ್ನು ಬಾಲಕಿ ಶಿಯಾ ಭೇಟಿ ಮಾಡಿದಳು   

ಬೆಂಗಳೂರು:ಥಲಸ್ಸೇಮಿಯಾದಿಂದ ನರಳಿದ್ದ ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಬಾಲಕಿ ತನಗೆ ರಕ್ತದ ಆಕರಕೋಶವನ್ನು ದಾನ ಮಾಡಿದ್ದ ನಗರದ ಟೆಕಿಯನ್ನು ಎರಡು ವರ್ಷಗಳ ಬಳಿಕ ಭೇಟಿ ಮಾಡಿ, ಧನ್ಯವಾದ ತಿಳಿಸಿದಳು.

ವಿಶ್ವ ಕ್ಯಾನ್ಸರ್‌ ದಿನದ ಹಿನ್ನೆಲೆಯಲ್ಲಿ ಜಾಗತಿಕ ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇ ಷನ್’ ಮಂಗಳವಾರ ಆಯೋಜಿಸಿದ್ದ ಕಾರ್ಯ ಕ್ರಮ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು.

ಬಾಲಕಿ ಶಿಯಾ, ದಾನಿ 26 ವರ್ಷದದೆಬೋಜ್ಯೋತಿ ಅವರಿಗೆ ಕೃತಜ್ಞತೆ ಸಲ್ಲಿಸಿದಳು.

ADVERTISEMENT

‘2016ರಲ್ಲಿ ಸ್ವ ಇಚ್ಛೆಯಿಂದ ರಕ್ತದ ಆಕರಕೋಶ ದಾನ ಮಾಡಲು ಹೆಸರು ನೋಂದಾಯಿಸಿದೆ. ನನ್ನ ರಕ್ತದ ಆಕರಕೋಶವನ್ನು ಯಾರಿಗೆ ನೀಡಲಾಗಿದೆ ಎಂಬುದು ತಿಳಿದಿರಲಿಲ್ಲ. ನನ್ನಿಂದ ಪುಟ್ಟ ಬಾಲಕಿಯ ಕಾಯಿಲೆ ಶಮನವಾಗಿರುವುದು ಅತೀವ ಸಂತೋಷವನ್ನುಂಟು ಮಾಡಿದೆ’ ಎಂದುದೆಬೋಜ್ಯೋತಿ ತಿಳಿಸಿದರು.

ಶಿಯಾಳ ತಂದೆ ಸೈಫುಲ್ಲ ಮಾತನಾಡಿ, ‘ರಕ್ತದ ಆಕರ ಕೋಶದ ಕಸಿಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದ ಪರಿಣಾಮ ನಿರಾಸೆಗೆ ಒಳಗಾಗಿದ್ದೆವು. ರಕ್ತದ ಆಕರಕೋಶ ಕಸಿಯಿಂದಥಲಸ್ಸೇಮಿಯಾ ಕಾಯಿಲೆಯನ್ನು ಗುಣಪಡಿಸಬಹುದು ಎಂಬುದು ತಿಳಿಯಿತು. ಒಂದು ವರ್ಷದಲ್ಲಿಯೇ ಹೊಂದಾಣಿಕೆಯಾಗುವ ರಕ್ತದ ಆಕರಕೋಶ ದೊರೆಯಿತು’ ಎಂದರು.

ಡಿಕೆಎಂಎಸ್‌– ಬಿಎಂಎಸ್‌ಟಿ ಫೌಂಡೇಷನ್ ನಿರ್ದೇಶಕಿಡಾ.ಲತಾ ಜಗನ್ನಾಥನ್, ‘ಕ್ಯಾನ್ಸರ್‌ಗೆ ರಕ್ತದ ಆಕರಕೋಶ ಕಸಿ ಪರಿಹಾರವಾಗಿದೆ. ನಮ್ಮಲ್ಲಿ 40 ಸಾವಿರ ದಾನಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಜನತೆಯಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.