ADVERTISEMENT

ಸಿಸಿಬಿ ಪೊಲೀಸ್ ಹೆಸರಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 16:33 IST
Last Updated 27 ಸೆಪ್ಟೆಂಬರ್ 2020, 16:33 IST

ಬೆಂಗಳೂರು: ‘ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡಿದ್ದ ನಾಗರಾಜ್ ಎಂಬಾತ, ನನ್ನಿಂದ ₹ 5 ಸಾವಿರ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ಶರತ್‌ ಎಂಬುವರು ಅನ್ನಪೂರ್ಣೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ.

‘ಅತ್ತಿಗುಪ್ಪೆ ನಿವಾಸಿ ಶರತ್ ನೀಡಿರುವ ದೂರು ಆಧರಿಸಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆಟೊಮೊಬೈಲ್ ಮಳಿಗೆಯಲ್ಲಿ ಶರತ್‌ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಶರಣಬಸವ ಎಂಬಾತ ₹ 90 ಸಾವಿರ ಪಡೆದು ವಂಚಿಸಿದ್ದ. ಅದನ್ನು ತಿಳಿದುಕೊಂಡಿದ್ದ ನಾಗರಾಜ್, ‘ನಾನು ಸಿಸಿಬಿ ಪೊಲೀಸ್. ಶರಣಬಸವನನ್ನು ಬಂಧಿಸಿ ಹಣ ವಾಪಸು ಕೊಡಿಸುತ್ತೇನೆ. ಸ್ವಲ್ಪ ಹಣ ಖರ್ಚಾಗುತ್ತದೆ’ ಎಂದಿದ್ದ. ನಂತರ, ₹ 5 ಸಾವಿರ ಪಡೆದು ನಾಪತ್ತೆಯಾಗಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.