ಬೆಂಗಳೂರು: ‘ಮಗುವಿನ ಕೈಗೆ ಪೋಷಕರೇ ಮೊಬೈಲ್ ನೀಡಿ ಸಂವೇದನಾ ಶೂನ್ಯ ಲೋಕಕ್ಕೆ ಕಳುಹಿಸುತ್ತಿದ್ದಾರೆ. ಮೊಬೈಲ್ ಪಡೆದುಕೊಂಡ ಮಗುವಿನ ಪಂಚೇಂದ್ರಿಯಗಳ ಕೆಲಸವೇ ನಿಂತುಹೋಗುತ್ತಿದೆ’ ಎಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ನವದೆಹಲಿಯ ವಿಜ್ಞಾನ್ ಪ್ರಸಾರ್ ಆಯೋಜಿಸಿದ್ದ ‘ಕನ್ನಡದಲ್ಲಿ ವಿಜ್ಞಾನ ಸಂವಹನ, ಜನಪ್ರಿಯತೆ ಮತ್ತು ವಿಸ್ತರಣೆ’ ವಿಷಯ ಕುರಿತು ಮಂಗಳವಾರದಿಂದ ಆರಂಭವಾದ ಎರಡು ದಿನಗಳ ಮುಕ್ತ ಚರ್ಚಾಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿಜ್ಞಾನವನ್ನು ಮಕ್ಕಳು ಸರಳವಾಗಿ ಕಲಿಸುವಂತಾಗಬೇಕು. ಪೋಷಕರಿಗೂ ಮಗುವಿನ ಮೂಲಕವೇ ವೈಜ್ಞಾನಿಕ ಸತ್ಯಗಳ ಅರಿವು ಮೂಡಿಸುವಂತಾಗಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.