ADVERTISEMENT

ಸ್ವಚ್ಛತಾ ಆಂದೋಲನ: ವಿಜೇತರ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 19:32 IST
Last Updated 16 ಜುಲೈ 2020, 19:32 IST
ಚಿತ್ರಕಲೆ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಡಿ.ವಿ. ಗೌರಿ ರಚಿಸಿದ ಚಿತ್ರ 
ಚಿತ್ರಕಲೆ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಡಿ.ವಿ. ಗೌರಿ ರಚಿಸಿದ ಚಿತ್ರ    

ಬೆಂಗಳೂರು: ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿರುವ ಹದಿನೈದು ದಿನಗಳ ‘ಸ್ವಚ್ಛತಾ ಪಖವಾಡಾ’ ಅಂಗವಾಗಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ (ಐಒಸಿಎಲ್‌) ರಾಜ್ಯ ಘಟಕದ ವತಿಯಿಂದ ಆನ್‌ಲೈನ್‌ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳ ವಿಜೇತರಾದವರ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ಸ್ವಚ್ಛತಾ ಅರಿವು ಮೂಡಿಸುವ ಭಿತ್ತಿಪತ್ರಗಳು, ಪೋಸ್ಟರ್‌ಗಳ ರಚನೆ, ಚಿತ್ರಕಲಾ ಸ್ಪರ್ಧೆಯನ್ನು ಕಿರಿಯ ಮತ್ತು ಹಿರಿಯ ವಿಭಾಗದವರಿಗೆ ನಡೆಸಲಾಗಿತ್ತು.

ಕಲಾ ಮತ್ತು ಪೋಸ್ಟರ್‌ ರಚನೆಯ ಕಿರಿಯ ವಿಭಾಗದಲ್ಲಿ ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆಯ ಸುರವಿ ಬಾಲಾಜಿ ಮತ್ತು ಹಿರಿಯ ವಿಭಾಗದಲ್ಲಿ ಪದ್ಮನಾಭನಗರದ ಕಾರ್ಮೆಲ್‌ ಶಾಲೆಯ ಡಿ.ವಿ. ಗೌರಿ ಪ್ರಥಮ ಸ್ಥಾನ ಪಡೆದಿದ್ದಾರೆ.

ADVERTISEMENT

‘ಕೇವಲ ಒಂದು ನಿಮಿಷ’ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಕೊತ್ತನೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಚಾಮುಂಡಿ, ಹಿರಿಯರ ವಿಭಾಗದಲ್ಲಿ ದೂರವಾಣಿ ನಗರದ ಐಟಿಐ ಸೆಂಟ್ರಲ್‌ ಶಾಲೆಯ ಎನ್. ಚೇತನ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.