ADVERTISEMENT

ಬೆಂಗಳೂರು: ಸಾವಯವ ಗೊಬ್ಬರ ಉಚಿತ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 4:28 IST
Last Updated 16 ಮಾರ್ಚ್ 2021, 4:28 IST

ಬೆಂಗಳೂರು: ಕಸ ಸಂಸ್ಕರಣಾ ಘಟಕಗಳಲ್ಲಿರುವ ಸಾವಯವ ಗೊಬ್ಬರವನ್ನು ರೈತರು ಉಚಿತವಾಗಿ ಕೊಂಡೊಯ್ಯಲು ಬಿಬಿಎಂಪಿ ಅವಕಾಶ ಕಲ್ಪಿಸಿದೆ.

ಬಿಬಿಎಂಪಿಯ ಏಳು ಕಸ ಸಂಸ್ಕರಣಾ ಘಟಕಗಳಲ್ಲಿ ನಿತ್ಯವೂ ಹಸಿ-ಕಸವನ್ನು ವಿಂಡ್‌ ರೋ ವಿಧಾನದಲ್ಲಿ ಸಂಸ್ಕರಿಸಲಾಗುತ್ತದೆ. ಅದನ್ನು 35 ಮಿ.ಮೀ ಹಾಗೂ 16 ಮಿ.ಮೀ ಗಾತ್ರದ ರಂಧ್ರಗಳಿರುವ ಯಂತ್ರಗಳಲ್ಲಿ ಜರಡಿಯಾಡಲಾಗುತ್ತದೆ. ಉಪ ಉತ್ಪನ್ನವಾಗಿ ಲಭಿಸುವ ಎರಡನೇ ದರ್ಜೆಯ ಕಾಂಪೋಸ್ಟ್ ಅನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ.

‘ರೈತರು ಈ ಉಪ ಉತ್ಪನ್ನವನ್ನು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ಗೊಬ್ಬರವಾಗಿ ಬಳಸಬಹುದು. ಇದರ ಬಳಕೆಯಿಂದ ನೆಲದ ಫಲವತ್ತತೆ ಹೆಚ್ಚಲಿದೆ’ ಎನ್ನುತ್ತಾರೆ ತಜ್ಞರು.

ADVERTISEMENT

ದೊಡ್ಡಬಿದಿರಕಲ್ಲಿನ ಕಸ ಸಂಸ್ಕರಣಾ ಘಟಕದಿಂದ ರೈತರು ಉಚಿತವಗಿ ಈ ಗೊಬ್ಬರವನ್ನು ಕೊಂಡೊಯ್ಯಬಹುದು ಎಂದು ದಾಸರಹಳ್ಳಿ ವಲಯದ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ: 8618001636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.