ADVERTISEMENT

ಚಿನ್ನಾಭರಣ ದರೋಡೆಗೆ ಕಾನ್‌ಸ್ಟೆಬಲ್‌ ನೆರವು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 19:46 IST
Last Updated 22 ನವೆಂಬರ್ 2020, 19:46 IST

ಬೆಂಗಳೂರು: ನಗರ್ತಪೇಟೆಯ ಆಭರಣ ಅಂಗಡಿಯೊಂದರ ಮೇಲೆ ದಾಳಿ ಸೋಗಿನಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣದಲ್ಲಿ ಇಬ್ಬರು ಕಾನ್‍ಸ್ಟೆಬಲ್‍ಗಳು ಭಾಗಿಯಾಗಿದ್ದು, ಒಬ್ಬರನ್ನು ಬಂಧಿಸಲಾಗಿದೆ.

ಕಾಡುಗೋಡಿ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಅಶೋಕ್ ಹಾಗೂ ಚೌಡೇಗೌಡ ಈ ನಕಲಿ ದಾಳಿಗೆ ಸಹಕರಿಸಿದ್ದರು. ಕಾನ್‌ಸ್ಟೆಬಲ್‌ ಅಶೋಕ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಚೌಡೇಗೌಡನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ನ.11ರಂದು ಈ ಪ್ರಕರಣ ನಡೆದಿತ್ತು. ಇಬ್ಬರು ಅಸಲಿ ಪೊಲೀಸರು ಸೇರಿದಂತೆ 8 ಮಂದಿ ಆಭರಣದ ಅಂಗಡಿಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಚಿನ್ನಾಭರಣ ಎಗರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.